Publish Date: Sat, 14 Jul 2018 (14:10 IST)
Updated Date: Sat, 14 Jul 2018 (14:12 IST)
ಬೆಂಗಳೂರು : ಕನ್ನಡದ ಕಿರುತೆರೆಯ ನಟಿ ಅರ್ಚನಾ ಲಕ್ಷ್ಮೀನಾಯರಣ ಸ್ವಾಮಿ ಅವರು ಇತ್ತೀಚೆಗೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯ ನಾಯಕಿ ‘ಜಾನಕಿ’ ಪಾತ್ರವನ್ನು ಮಾಡಿದ್ದ ನಟಿ ಅರ್ಚನಾ ಅವರು ಇತ್ತೀಚಿಗೆ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿಲ್ಲ.
ಆದರೆ ಇದೀಗ ಅವರು ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಸಿದ್ದತೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ವಿಘ್ನೇಶ್ ಶರ್ಮಾ ಎನ್ನುವವರ ಜೊತೆ ಅರ್ಚನಾ ನಿಶ್ಚಿತಾರ್ಥ ನಡೆದಿದೆ. ವಿಘ್ನೇಶ್ ಬೆಂಗಳೂರಿನವರೇ ಆಗಿದ್ದು ನ್ಯೂಯಾರ್ಕ್ ನಲ್ಲಿ ವಾಸವಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ