ಭಾರತೀಯ ಬ್ಯಾಟ್ಸ್ಮನ್ಗಳ ದಯೆ, ಮಿಚೆಲ್ ಜಾನ್ಸನ್ ಆಶಿರ್ವಾದ ಮತ್ತು ಅಡಂ ಗಿಲ್ಕ್ರಿಸ್ಟ್ ಬೆಂಬಲದ ಮೇಲೆ ಟೀಮ್ ಇಂಡಿಯಾ ತಂಡವು ಆಸ್ಟ್ರೇಲಿಯಾ ವಿರುದ್ಧ ವಡೋದರಾದಲ್ಲಿ ನಡೆದ ಸರಣಿಯ ಐದನೆ ಏಕದಿನ ಪಂದ್ಯದಲ್ಲಿ 9 ವಿಕೆಟ್ಗಳ ಭಾರಿ ಅಂತರದಿಂದ ಸೋಲು ಅನುಭವಿಸಿತು.
ಆಸ್ಟ್ರೇಲಿಯದ ಆಡಂ ಗಿಲ್ಕ್ರಿಸ್ಟ್ ಅಜೇಯ (79) ಮ್ಯಾಥು ಹೆಡನ್ (29) ಮತ್ತು ರಿಕಿ ಪಾಂಟಿಂಗ್ ಅವರ ಅಜೇಯ 39 ರನ್ಗಳ ನೆರವಿನಿಂದ ಭಾರತ ನೀಡಿದ 149 ರನ್ಗಳ ಸವಾಲನ್ನು 25.5 ಓವರುಗಳಲ್ಲಿ ತಲುಪಿ ಸರಣಿಯಲ್ಲಿ 3-1 ರ ಮುನ್ನಡೆ ಸಾಧಿಸಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ ವಿಫಲವಾಯಿತು, ವೇಗದ ಬೌಲರ್ ಮಿಚೆಲ್ ಜಾನ್ಸನ್ ಅವರ ಬೌಲಿಂಗ್ನಲ್ಲಿ ಮುಗ್ಗರಿಸಿತು. ಸಚಿನ್ ತೆಂಡುಲ್ಕರ್ (47), ಇರ್ಪಾಣ್ ಪಠಾಣ್ (26) ಮತ್ತು ಜಹೀರ್ ಖಾನ್ (28) ರನ್ ಮಾಡಿದ್ದು ಬಿಟ್ಟರೆ ಉಳಿದವರು ಯಾರು ಎರಡಂಕಿಯನ್ನು ದಾಟಲಿಲ್ಲ.