Select Your Language

Notifications

webdunia
webdunia
webdunia
webdunia

ಇಬ್ಬರು ರೌಡಿಗಳ ನಡುವೆ ಗುಂಡಿನ ಕಾಳಗ: ಹರಿಯಿತು ನೆತ್ತರ ಹೊಳೆ

ಇಬ್ಬರು ರೌಡಿಗಳ ನಡುವೆ ಗುಂಡಿನ ಕಾಳಗ: ಹರಿಯಿತು ನೆತ್ತರ ಹೊಳೆ
, ಶನಿವಾರ, 19 ಏಪ್ರಿಲ್ 2014 (18:14 IST)
PR
PR
ಗುಲ್ಬರ್ಗ: ಗುಲ್ಬರ್ಗದ ಬಳಿ ಇಬ್ಬರು ರೌಡಿಗಳ ನಡುವೆ ಗುಂಡಿನ ಕಾಳಗದಲ್ಲಿ ನೆತ್ತರ ಹೊಳೆ ಹರಿದಿದೆ. ಕುಖ್ಯಾತ ರೌಡಿಶೀಟರ್ ಹಲವಾರು ಪ್ರಕರಣದಲ್ಲಿ ಆರೋಪಿಯಾಗಿದ್ದ ರವಿ ಬೈರಾಮಡಗಿ ರೌಡಿ ಸೀನ್ಯಾ ಜತೆ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದಾನೆ. ರೌಡಿ ಸೀನ್ಯಾಗೂ ಕೂಡ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿದ್ದಾನೆ. ಇವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತ್ತಿತ್ತು. ಸೀನ್ಯಾ ರವಿಯ ತಲೆಗೆ ಗುಂಡು ಹಾರಿಸಿ ತಲೆಗೆ ಮಚ್ಚಿನಿಂದ ಹೊಡೆದು ಕೊಂದಿದ್ದಾನೆ.

ಪಿಸ್ತೂಲಿನಿಂದ ಗುಂಡಿ ಕಾಳಗಕ್ಕೆ ರೌಡಿಗಳು ಇಳಿದರೂ ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು ಎಂಬ ಪ್ರಶ್ನೆ ಉದ್ಭವವಾಗಿದೆ. ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಗೆ ರೌಡಿಯೊಬ್ಬ ಗುಂಡಿಕ್ಕಿ ಹತ್ಯೆಮಾಡಿದ ಘಟನೆ ಇನ್ನೂ ಮಾಸುವ ಮುನ್ನ ಈ ಘಟನೆ ಜನರನ್ನು ತಲ್ಲಣಗೊಳಿಸಿದೆ.

Share this Story:

Follow Webdunia kannada