Webdunia - Bharat's app for daily news and videos

Install App

ಬೀದಿಗೆ ಬಂದ ಮಹಿಳಾ ದೌರ್ಜನ್ಯ

ಇನ್ನೂ ಅಂಗೀಕಾರ ಪಡೆಯದ ಮಹಿಳಾ ಮೀಸಲಾತಿ

Webdunia
PTI
ಸ್ವಾತಂತ್ರ್ಯ ಬಂದು 60 ವಸಂತಗಳನ್ನು ದಾಟಿದ ಬಳಿಕ ದೇಶಕ್ಕೊಬ್ಬ ಮಹಿಳಾ ರಾಷ್ಟ್ರಪತಿಯ ಸುಯೋಗ, ನ್ಯಾಯಕ್ಕಾಗಿ ಮಹಿಳೆಯೊಬ್ಬಳು ಬೀದಿ ಬೀದಿಯಲ್ಲಿ ಅರೆನಗ್ನಳಾಗಿ ನಡೆಯಬೇಕಾದ ಪ್ರಸಂಗ ಮತ್ತು ಮಹಿಳೆಯರು ತಮ್ಮ ಹಕ್ಕಿಗಾಗಿ, ಶಾಸನಸಭೆಗಳಲ್ಲಿ ಮೀಸಲಾತಿಗಾಗಿ, ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕುರಿತ ಈಡೇರದ ಆಶ್ವಾಸನೆಗಳು... 2007ರಲ್ಲಿ ಇಡೀ ಮಹಿಳಾ ಸಮುದಾಯವನ್ನು ಕಾಡಿದ ಸಂಗತಿ.

ಪತಿ ಮತ್ತು ಮಾವನ ಮನೆಯವರ ದೌರ್ಜನ್ಯದ ವಿರುದ್ಧ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಕಾರಣಕ್ಕೆ ಗುಜರಾತಿನ ರಾಜ್‌ಕೋಟಿನ ಬೀದಿಗಳಲ್ಲಿ ಪೂಜಾ ಎಂಬ 22ರ ಹರೆಯದ ಯುವತಿ ಅರೆನಗ್ನಳಾಗಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಮೊರೆಯಿಟ್ಟಳು.

ಈ ಆಘಾತಕಾರಿ ಘಟನೆಯು ಸ್ಥಳೀಯ ಅಧಿಕಾರಿಗಳನ್ನು ಬಡಿದೆಚ್ಚರಿಸಿತು ಮತ್ತು ಕೊನೆಗೆ ಸರಕಾರವೂ ಆಕೆಗಾದ ಅನ್ಯಾಯವನ್ನು ಗಮನಿಸಿತು.

ಈ ನಡುವೆ, ಇಂಗ್ಲೆಂಡಿನಲ್ಲಿ ಬಾಲಿವುಡ್ ಪತಾಕೆ ಹಾರಿಸಹೊರಟ ಶಿಲ್ಪಾ ಶೆಟ್ಟಿ, ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಪ್ರತಿಸ್ಪರ್ಧಿ ಜೇಡ್ ಗೂಡಿ ಏಷ್ಯಾದ ನಾಯಿ ಎಂದು ಶಿಲ್ಪಾರನ್ನು ಹೀಯಾಳಿಸಿದ್ದು, ಜನಾಂಗೀಯ ದೌರ್ಜನ್ಯ ಎಂಬ ವಿಷಯವಾಗಿ, ಅಂತಾರಾಷ್ಟ್ರೀಯ ಗಮನ ಸೆಳೆಯಿತು. ಇದೇ ಸ್ಪರ್ಧೆಯಲ್ಲಿ ಶಿಲ್ಪಾ ಶೆಟ್ಟಿ ವಿಜೇತರೂ ಆದರು.

ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಪ್ರಸ್ತಾಪ ಎಂದಿನಂತೆ ಈ ವರ್ಷವೂ ಮೂಲೆಗುಂಪಾಯಿತು. ಈ ವಿಷಯದಲ್ಲಿ ಯಾವತ್ತೂ ಮೂಡದ ಒಮ್ಮತ, ಈ ವರ್ಷವೂ ಮರೀಚಿಕೆಯಾಗಿಯೇ ಉಳಿಯಿತು.

ಇತ್ತೀಚೆಗಷ್ಟೇ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನಾರಂಭದಲ್ಲಿ ಮಹಿಳಾ ಸಂಘಟನೆಗಳು ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಮತ್ತು ರಾಜಕೀಯ ಪಕ್ಷಗಳಿಂದ ಎದುರಾಗುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಸದನದಲ್ಲಿ ಬಗೆಹರಿಸಿಕೊಳ್ಳಲೇಬೇಕು ಎಂದು ಒತ್ತಾಯಿಸಿದ್ದವು.

ಆದರೆ ಸರಕಾರವು, ಪ್ರಸ್ತಾಪಿತ ಶಾಸನದ ಕುರಿತು ಒಮ್ಮತಾಭಿಪ್ರಾಯ ಮೂಡಿಸಲು ಪ್ರಯತ್ನಿಸಿ, ಅದನ್ನು ಸಂಸತ್ತಿನೆದುರು ಇರಿಸುವುದಾಗಿ ಹೇಳಿ ಕೈತೊಳೆದುಕೊಂಡಿತು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ