Webdunia - Bharat's app for daily news and videos

Install App

ದೀಪಾವಳಿಯ ಶುಭ ಮುಹೂರ್ತ

Webdunia
ದಕ್ಷಿಣ ಭಾರತದಲ್ಲಿ ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ದೀಪಾವಳಿಯನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ.

ಈ ಬಾರಿ ನವೆಂಬರ್ 8ರಂದು ನರಕ ಚತುರ್ದಶಿ, 9ರಂದು ದೀಪಾವಳಿ ಹಾಗೂ 10ರಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ.

ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮುನ್ನ ಅಭ್ಯಂಜನ ಸ್ನಾನ ಮಾಡುವ ಸಂಪ್ರದಾಯವಿದೆ. ಅಂದು ಸ್ನಾನ ಮಾಡಿ, ಮೃತ್ಯು ದೇವತೆಯಾದ ಯಮರಾಜನಿಗೆ ತರ್ಪಣ ನೀಡಿ, ಒಂದು ದೀಪವನ್ನು ಹಚ್ಚುವುದು ವಾಡಿಕೆ.

ಮರುದಿನ ಅಮಾವಾಸ್ಯೆ. ವರ್ಷದ ಅತ್ಯಂತ ಕತ್ತಲೆಯ ದಿನ ಎಂದು ಪರಿಗಣಿಸಲಾಗಿದೆ. ಅಂದು ಲಕ್ಷ್ಮೀ ಪೂಜೆ ನೆರವೇರಿಸಲಾಗುತ್ತದೆ. ಪ್ರದೋಷ ಕಾಲ ಪ್ರಶಸ್ತ. ಅಂದರೆ ಸೂರ್ಯಾಸ್ತದ ಬಳಿಕ ಒಂದೂವರೆ ಗಂಟೆ ಸಮಯದಲ್ಲಿ ಲಕ್ಷ್ಮೀ ಪೂಜೆ ಅತ್ಯಂತ ಶುಭ.

ಮೂರನೇ ದಿನ ಬಲಿ ಪಾಡ್ಯಮಿ. ಕಾರ್ತಿಕ ಶುಕ್ಲ ಪಾಡ್ಯಮಿಯಾದ ಅಂದು ಮಹಾವಿಷ್ಣುವು ವಾಮನಾವತಾರವೆತ್ತಿ ಬಲಿಯನ್ನು ಪಾತಾಳಕ್ಕೆ ತುಳಿದ ಎನ್ನಲಾಗುತ್ತಿದೆ. ಇದೇ ದಿನ ತ್ರೇತಾ ಯುಗದಲ್ಲಿ ಶ್ರೀರಾಮ ಪಟ್ಟಾಭಿಷೇಕವಾಯಿತು ಎನ್ನಲಾಗುತ್ತದೆ. ದ್ವಾಪರ ಯುಗದಲ್ಲಿ ಪಾಂಡವರು ಅಜ್ಞಾತವಾಸದಿಂದ ಕೌರವರ ಕಣ್ಣಿಗೆ ಬಿದ್ದದ್ದು ಇದೇ ದಿನ ಎಂಬ ಪ್ರತೀತಿ ಇದೆ.

ಉತ್ತರ ಭಾರತದಲ್ಲಿ ಈ ಮೂರೂ ದಿನಗಳ ಮೊದಲು ಒಂದು ದಿನ ಧನ್ ತೇರಸ್ ಆಗಿಯೂ, ಈ ಮೂರು ದಿನಗಳು ಕಳೆದು ಬರುವ ದಿನವನ್ನು ಯಮ ದ್ವಿತೀಯವನ್ನು ಭಾಯಿ ದೂಜ್ ಆಗಿಯೂ ಆಚರಿಸುತ್ತಾರೆ. ಅಂದರೆ ಅವರಿಗೆ ಐದು ದಿನಗಳ ಹಬ್ಬವಿದು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments