Webdunia - Bharat's app for daily news and videos

Install App

ಅಕ್ಷರ ಜಾತ್ರೆ-ಐಟಿ-ಬಿಟಿಯವರಲ್ಲಿ ಕೈ ಚಾಚಲ್ಲ: ನಲ್ಲೂರು ನುಡಿ

Webdunia
ಸೋಮವಾರ, 7 ಫೆಬ್ರವರಿ 2011 (16:05 IST)
ಸಮ್ಮೇಳನ ನಡೆಸಲು ನಾವು ಕಸ ಗುಡಿಸೋರ ಬಳಿ ಕೈ ಚಾಚುತ್ತೇವೆಯೇ ವಿನಾ ಐಟಿ-ಬಿಟಿಯವರ ಹತ್ತಿರ ಕೈ ಚಾಚಲ್ಲ. ಈ ಸಮ್ಮೇಳನದಲ್ಲಿ ಅದನ್ನು ನಾವು ಮಾಡಿ ತೋರಿಸಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಖಾರವಾಗಿಯೇ ನುಡಿದಿದ್ದಾರೆ.

77 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮಿಂದ ಅವರು ಬದುಕಬೇಕೇ ಹೊರತು ಅವರಿಂದ ನಾವಲ್ಲ. ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಿಂದ ಬತ್ತ, ಬದನೆ, ಬೂದುಗುಂಬಳ ಬೆಳೆಯಕ್ಕಾಗಲ್ಲ ಎಂದು ಅವರು ಲೇವಡಿ ಮಾಡಿದರು.

ಐಟಿ ಬಿಟಿ ಮಂದಿ ಸಹಾಯ ಮಾಡಲಿಲ್ಲ ಎಂದು ನಮಗೇನೂ ಬೇಸರವಿಲ್ಲ. ಅವರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದರು. ಹಣಕಾಸಿನ ವಿವರ ನೀಡಿದ ಅವರು ಸಮ್ಮೇಳನಕಕ್ಕೆ ಹಣ ಸಹಾಯ ಮಾಡಿದ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಇನ್ನೂ ಎರಡು ಕೋಟಿ ರೂಪಾಯಿಯಷ್ಟು ಹಣ ಸರ್ಕಾರಿ ನೌಕರರ ಸಂಘದಿಂದ ಬರುವ ನಿರೀಕ್ಷೆ ಇದೆ. ಅಷ್ಟು ಬಂದರೆ ಸಾಕಾಗುತ್ತದೆ ಎಂದು ಅವರು ಹೇಳಿದರು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments