Webdunia - Bharat's app for daily news and videos

Install App

ವಿಪರೀತ ಆತಂಕ ಉಬ್ಬಸಕ್ಕೆ ನಾಂದಿಯಂತೆ

Webdunia
ನೀವು ಅತಿಶೀಘ್ರವಾಗಿ ಆತಂಕಕ್ಕೊಳಗಾಗುವ ದೌರ್ಬಲ್ಯವನ್ನು ಹೊಂದಿದ್ದೀರಾ? ನಿಮ್ಮ ಉತ್ತರ ಹೌದೆಂದಾದರೆ, ನಿಮ್ಮನ್ನು ನೀವು ನಿಗ್ರಹಿಸಿಕೊಳ್ಳಲೇಬೇಕಾದ ಸಮಯವಿದು. ಇಲ್ಲವಾದರೆ ನಿಮ್ಮ ಈ ಸಮಸ್ಯಗೆ ಉಬ್ಬಸ ರೋಗಕ್ಕೆ ಹಾದಿಯಾಗಬಹುದು.

ಖಿನ್ನತೆಯಿಂದ ಕೂಡಿರುವ ಮಾನಸಿಕ ವ್ಯಾಧಿಯಿಂದ ಬಳಲುತ್ತಿರುವವರು ಶಾಂತವಾಗಿರದಿದ್ದರೆ, ಆಸ್ತಮಾಕ್ಕೀಡಾಗುವ ಛಾನ್ಸ್‌ಗಳು ಮೂರು ಪಟ್ಟು ಹೆಚ್ಚು ಎಂಬುದಾಗಿ ಅಧ್ಯಯನ ಒಂದು ಹೇಳಿದೆ. ಹೈಡಲ್‌ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಂಶವನ್ನು ಪತ್ತೆ ಮಾಡಿದ್ದಾರೆ ಎಂಬುದಾಗಿ 'ನ್ಯೂ ಸೈಂಟಿಸ್ಟ್' ಪತ್ರಿಕೆ ವರದಿ ಮಾಡಿದೆ.

ಸಂಶೋಧಕರು ಆಸ್ತಮಾ ಇಲ್ಲದ ನಾಲ್ಕುಸಾವಿರ ಮಂದಿಗೆ ಪ್ರಶ್ನಾವಳಿಗಳನ್ನು ನೀಡಿ ಅವರ ಮಾನಸಿಕ ಉನ್ಮಾದ, ಚಿತ್ತವಿಕಾರ, ಖಿನ್ನತೆ ಹಾಗೂ ಆತಂಕ ಕುರಿತು ಪೃವೃತ್ತಿಗಳ ಕುರಿತು ವಿಶ್ಲೇಷಣೆ ನಡೆಸಿದ್ದರು.

ಒಂಬತ್ತು ವರ್ಷಗಳ ಬಳಿಕ ಅಡ್ರಿಯನ್ ಲೋಯೆರ್‌ಬ್ರೂಕ್ಸ್ ನೇತೃ್ತ್ವದ ಸಂಶೋಧಕ ತಂಡವು ಅಧ್ಯಯನಕ್ಕೆ ಬಳಸಿದ್ದ ವ್ಯಕ್ತಿಗಳ ಕುರಿತು ಮರುವಿಶ್ಲೇಷಣೆ ನಡಿಸಿತ್ತು. ಹೆಚ್ಚಿನ ಮಟ್ಟದಲ್ಲಿ ಚಿತ್ತವಿಕಾರ ಹೊಂದಿದ್ದವರಲ್ಲಿ ಮ‌ೂರುಪಟ್ಟು ಹೆಚ್ಚಾಗಿ ಆಸ್ತಮಾ ವೃದ್ಧಿಯಾಗಿತ್ತು.

ತೀವ್ರವಾದ ಒತ್ತಡವು ಹಾರ್ಮೋನ್ ಮಟ್ಟವನ್ನು ಏರುಪೇರುಂಟು ಮಾಡುತ್ತದೆ ಎಂಬುದು ಪ್ರಯೋಗ ಪಶುಗಳ ಮೇಲಿನ ಅಧ್ಯಯನ ಹೇಳಿವೆ. ಹಾಗಾಗಿ ಮಾನಸಿಕ ಲಕ್ಷಣಗಳು ಇಂತಹ ಪರಿಣಾಮಗಳಿಗೆ ಕಾರಣವಾಗಿರಬಹುದು ಎಂದು ಅಭಿಪ್ರಾಯಿಸುವ ಲೋಯೆರ್‌ಬ್ರೂಕ್ಸ್, ಇಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆತಂಕ ತಗ್ಗಿಸುವ ಚಿಕಿತ್ಸೆಯು ಆಸ್ತಮಾ ವೃದ್ಧಿಯ ಅಪಾಯವನ್ನು ಕಡಿಮೆಗೊಳಿಸಬಹುದು ಎಂದು ಎಂದು ಹೇಳಿದ್ದಾರೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments