Webdunia - Bharat's app for daily news and videos

Install App

ಏಡ್ಸ್, ಕ್ಯಾನ್ಸರ್ ರೋಗಿಗಳಿಗೆ ಶುಭಸುದ್ದಿ ಒಂದೈತೆ

Webdunia
ಮಾನವ ದೇಹದ ಪ್ರತಿರೋಧ ಶಕ್ತಿಯನ್ನು ಸಕ್ರಿಯವಾಗಿಸುವ ಬಿಳಿರಕ್ತಕಣಗಳನ್ನು ತಡೆಯಯುವಂತಹ ಯಾಂತ್ರಿಕತೆಯನ್ನು ಕೆನಡಾದ ವಿಜ್ಞಾನಿಯೊಬ್ಬರು ಕಂಡು ಹಿಡಿದಿದ್ದು, ಎಚ್ಐವಿ ಮತ್ತು ಕ್ಯಾನ್ಸರ್ ರೋಗಿಗಳಿಗೆ ಶುಭಸಮಾಚಾರ ಕೇಳಿಬಂದಿದೆ.

ಸಿಡಿ4+ ಎಂಬ ಈ ಬಿಳಿ ರಕ್ತಕಣಗಳು ಕಿಮೋಥೆರಪಿ ಹಾಗೂ ಅಸ್ಥಿಮಜ್ಜೆ ಬದಲಾವಣೆವೇಳೆ ದೊಡ್ಡ ಸಂಖ್ಯೆಯಲ್ಲಿ ನಾಶವಾಗುತ್ತದೆ. ಲ್ಯೂಕೆಮಿಯಾ ಮತ್ತು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಈ ಚಿಕಿತ್ಸೆ ಅತ್ಯವಶ್ಯವಾಗಿದೆ. ಬಿಳಿರಕ್ತ ಕಣಗಳ ನಾಶವು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಇದರಿಂದಾಗಿ ರೋಗಿಯು ಹಲವಾರು ಸೋಂಕುಗಳಿಗೆ ತುತ್ತಾಗುತ್ತಾನೆ.

ಬಿಳಿರಕ್ತಕಣಗಳ ಮರುಸೃಷ್ಟಿಗೆ ಹಲವಾರು ವರ್ಷಗಳು ಬೇಕಾಗುತ್ತದೆ. ಆದರೆ ಈ ಬಿಳಿ ರಕ್ತಕಣಗಳ ನಾಶಕ್ಕೆ ಕಾರಣವಾಗುವ ಯಂತ್ರವ್ಯವಸ್ಥೆಯನ್ನು ಕಂಡುಹಿಡಿದಿರುವುದು ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವಂತಹ ರೋಗವನ್ನು ಹೊಂದಿರುವವರಲ್ಲಿ ಆಶಾಕಿರಣವನ್ನು ಮೂಡಿಸಿದೆ.

ಮಾಂಟ್ರಿಯಲ್‌ನ ಮೈಸೊನ್ವೆ-ರೋಸ್ಮೌಂಟ್ ಆಸ್ಪತ್ರೆಯ ಮಾರ್ಟಿನ್ ಗುಯ್ಮೌಂಡ್ ಅವರು ಈ ಅಪರೂಪದ ಅಧ್ಯಯನ ನಡೆಸಿದ್ದಾರೆ.

ಮಾರ್ಟಿನ್ ಅವರ ಈ ಅಧ್ಯಯನವು ಬಿಳಿ ರಕ್ತಕಣಗಳ ವಿಭಜನೀಯ ಸಾಮರ್ಥ್ಯ ಮೇಲಿನ ನಕಾರಾತ್ಮಕ ನಿಯಂತ್ರಣ ಕುಣಿಕೆಯನ್ನು ಪತ್ತೆ ಮಾಡಿದೆ ಎಂದು ವಿಶ್ವವಿದ್ಯಾನಿಲಯದ ಹೇಳಿಕೆ ತಿಳಿಸಿದೆ.

ಈ ನಿಯಂತ್ರಣ ಕುಣಿಕೆಯ ಮೇಲೆ ಕಾರ್ಯನಿರ್ವಹಿಸುವ ಮೂಲಕ ಬಿಳಿರಕ್ತಕಣಗಳ ಉತ್ಪತ್ತಿಯನ್ನು ಸೃಷ್ಟಿಸಬಹುದಾಗಿದ್ದು ಇದು ನಿರೋಧಕ ಶಕ್ತಿಯನ್ನು ಪುನಸ್ಥಾಪಿಸುತ್ತದೆ ಎಂಬುದಾಗಿ ಹೇಳಿಕೆಯಲ್ಲಿ ಮಾರ್ಟಿನ್ ಅವರನ್ನು ಉಲ್ಲೇಖಿಸಲಾಗಿದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments