Publish Date: Mon, 13 Aug 2018 (19:21 IST)
Updated Date: Mon, 13 Aug 2018 (19:23 IST)
ರಾಜಧಾನಿಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ. 15ರಂದು ಬೆಂಗಳೂರು ಜಿಲ್ಲೆ ಹಾಲುಮತ ಮಹಾಸಭಾದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 221ನೇ ಜನ್ಮದಿನೋತ್ಸವ ಆಚರಣೆ ಆಯೋಜಿಸಲಾಗಿದೆ.
ಜನ್ಮದಿನೋತ್ಸವ ಸಡಗರದಿಂದಿರುವಂತೆ ಮಾಡಲು ಬೈಕ್ ರ್ಯಾಲಿ, ಆಟೋ ರ್ಯಾಲ ಹಾಗೂ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಕಾಳಿದಾಸ ಹೆಲ್ತ್ ಟ್ರಸ್ಟ್ ವತಿಯಿಂದ ಉಚಿತ ಮಧುಮೇಹ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳುವರು.