Webdunia - Bharat's app for daily news and videos

Install App

ವೆಜ್ ಕಟ್ಲೆಟ್

Webdunia
ಅವಶ್ಯಕ ಸಾಮಗ್ರಿಗಳು:

ಆಲೂಗಡ್ಡೆ ಕಾಲು ಕಿಲೋ
ಈರುಳ್ಳಿ ಎರಡು
ಎರಡು ಕ್ಯಾರೆಟ್
ಕಾಲು ಕಪ್ ಹಸಿ ಬಟಾಣಿ
ಕಾಲು ಕಪ್ ಬ್ರೆಡ್ ತುಣುಕುಗಳು
ಒಂದು ಚಮಚ ಮೈದಾ
ಒಂದು ಚಮಚ ಅಕ್ಕಿ ಹಿಟ್ಟು
ರುಚಿಗೆ ತಕ್ಕಷ್ಟು ಉಪ್ಪು
ಕಾಲು ಚಮಚ ಕಾರದ ಪುಡಿ
ಗರಂ ಮಸಾಲೆ ಪುಡಿ

ತಯಾರಿ ವಿಧಾನ:

ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಕೈಯಿಂದ ಪುಡಿಪುಡಿ ಮಾಡಿಟ್ಟುಕೊಳ್ಳಿ. ಕ್ಯಾರೆಟನ್ನು ಪುಟ್ಟಪುಟ್ಟದಾಗಿ ಕತ್ತರಿಸಿ ಬಟಾಣಿ ಕಾಳಿನೊಂದಿಗೆ ಬೇಯಿಸಿ. ಈರುಳ್ಳಿ ಕತ್ತರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಮಾಡಿ ಈರುಳ್ಳಿ ತುಣುಕುಗಳನ್ನು ಹಾಕಿ ಹುರಿಯಿರಿ. ಇದಕ್ಕೆ ಬೆಂದ ಆಲೂ, ಕ್ಯಾರೆಟ್ ಮತ್ತು ಬಟಾಣಿ ಸೇರಿಸಿ ನೀರಿಂಗುವ ತನಕ ಹುರಿಯಿರಿ. ಉಪ್ಪು ಖಾರಪುಡಿ, ಗರಂ ಮಸಾಲೆಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಕೆಳಗಿರಿಸಿ.ಪಾತ್ರೆಯೊಂದರಲ್ಲಿ ಮೈದಾ ಮತ್ತು ಅಕ್ಕಿಹುಡಿಯನ್ನು ಸೇರಿಸಿ ಸ್ಪಲ್ಪ ನೀರುಹಾಕಿ ಪೇಸ್ಟ್ ಮಾಡಿಟ್ಟುಕ್ಕೊಳ್ಳಿ. ತರಕಾರಿ ಮಿಶ್ರಣವನ್ನು ಉಂಡೆಗಳಾಗಿಸಿ ಈ ಪೇಸ್ಟಿನಲ್ಲಿ ಮುಳುಗಿಸಿ ಇದಕ್ಕೆ ಬ್ರೆಡ್ ತುಣುಕುಗಳನ್ನು ಸೇರಿಸಿ ಬಾಳೆಎಲೆ ಅಥವಾ ದಪ್ಪ ಪ್ಲಾಸ್ಟಿಕ್‌ಗೆ ಎಣ್ಣೆ ಸವರಿ ಅದರ ಮೇಲೆ ಉಂಡೆಗಳನ್ನು ಇರಿಸಿ ಬೇಕಾದ ಆಕಾರಕ್ಕೆ ಒತ್ತಿ. ಕಾವಲಿ ಬಿಸಿಗಿಟ್ಟು ಎಣ್ಣೆ ಸವರಿ ಅದರ ಮೇಲೆ ಕಟ್ಲೆಟ್‌ಗಳನ್ನು ಇರಿಸಿ ಕಾಯಿಸಿ. ಎರಡೂ ಬದಿಗೆ ಎಣ್ಣೆ ಹಾಕಿ ಕಾಯಿಸಿ. ಟೊಮೇಟೊ ಸಾಸ್ ಹಾಗೂ ಪುದಿನ ಚಟ್ನಿಯೊಂದಿಗೆ ಬಿಸಿಬಿಸಿ ಬಡಿಸಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

Show comments