Webdunia - Bharat's app for daily news and videos

Install App

ಒಮಿಕ್ರಾನ್‍ಗೆ ಯಾವ ಲಸಿಕೆ ಮದ್ದು..!

Webdunia
ಮಂಗಳವಾರ, 30 ನವೆಂಬರ್ 2021 (08:02 IST)
ಹೊಸ ದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಒಮಿಕ್ರಾನ್ಗೂ ಲಸಿಕೆಯೇ ಮದ್ದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದರಿಂದ ನೂತನ ರೂಪಾಂತರಿ ಮೂಡಿಸಿದ್ದ ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
'ಒಮಿಕ್ರಾನ್ ರೂಪಾಂತರಿಯು ಅಪಾಯಕಾರಿಯಾಗಿದ್ದು, ಕ್ಷಿಪ್ರವಾಗಿ ಪಸರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇದು ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.

ಕೊರೊನಾ ದೀರ್ಘಕಾಲೀನ ಸಮಸ್ಯೆಯಾಗಿರುವುದರಿಂದ ಜಗತ್ತಿನಾದ್ಯಂತ ಈಗ ಲಸಿಕೆಯೇ ರೂಪಾಂತರಿಗಳ ವಿರುದ್ಧ ಹೋರಾಡುವ ನಿರ್ಣಾಯಕ ಅಸ್ತ್ರ' ಎಂದು ತಜ್ಞರು ವಿವರಿಸಿದ್ದಾರೆ.
ಒಮಿಕ್ರಾನ್ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಕಡಿಮೆ.
ಇದು ಕ್ಷಿಪ್ರವಾಗಿ ಹರಡಿದರೂ, ಕೊರೊನಾ ನಿರೋಧಕ ಲಸಿಕೆಯಿಂದ ನಿಯಂತ್ರಿಸಬಹುದಾಗಿದೆ' ಎಂದು ರಾಷ್ಟ್ರೀಯ ರೋಗ ನಿರೋಧಕ ಸಂಸ್ಥೆ (ಎನ್ಐಐ) ವಿಜ್ಞಾನಿ ಸತ್ಯಜಿತ್ ರಾಥ್ ತಿಳಿಸಿದ್ದಾರೆ.
ಕೋಲ್ಕೊತಾದ ಸಿಎಸ್ಐಆರ್ - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ (ಐಐಸಿಬಿ) ಹಿರಿಯ ವಿಜ್ಞಾನಿ ಉಪಾಸನಾ ರಾಯ್ ಅವರು ಸಹ ಲಸಿಕೆಗಳ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ.
'ದೇಶದಲ್ಲಿ ಲಸಿಕೆ ವಿತರಣೆಗೆ ಮತ್ತಷ್ಟು ವೇಗ ನೀಡಬೇಕು. ಜನರು ಸಹ ಕೇಂದ್ರ ಸರಕಾರದ ಮಾರ್ಗಸೂಚಿ ಪಾಲಿಸಬೇಕು. ಆದಾಗ್ಯೂ, ಈಗಾಗಲೇ ದೇಶದಲ್ಲಿ ಹೆಚ್ಚಿನ ಜನ ಕನಿಷ್ಠ ಒಂದು ಡೋಸ್ ಪಡೆದಿರುವುದರಿಂದ ಹೆಚ್ಚಿನ ಆತಂಕವಿಲ್ಲ' ಎಂದು ಮಾಹಿತಿ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಪಾಳದತ್ತ ಮೂರನೇ ಮಾನವೀಯ ನೆರವು ಹೊತ್ತ ಭಾರತದ ವಿಮಾನ

ತಲೆಮರೆಸಿಕೊಂಡಿರುವ ಅಧಿಕಾರಿ ಸಿಕ್ಕರೆ ಸರ್ಕಾರದ ಹಗರಣ ಬಯಲಿದೆ: ಪ್ರಹ್ಲಾದ್ ಜೋಶಿ ಕಿಡಿ

ವಾಲ್ಮೀಕಿ ನಿಗಮಕ್ಕೆ ಆ 185 ಕೋಟಿ ರೂ ಬರೋವರೆಗೂ ನಮ್ಮ ಹೋರಾಟ ನಿಲ್ಲಲ್ಲ: ಬಿವೈ ವಿಜಯೇಂದ್ರ

ಅವರು ಸುರಕ್ಷಿತವಾಗಿರುವುದು ದೊಡ್ಡ ನಿರಾಳತೆಯ ವಿಷಯ: ನೇಪಾಳದಿಂದ ರಕ್ಷಿಸಲ್ಪಟ್ಟ ಯಾತ್ರಿಕರನ್ನು ಭೇಟಿಯಾದ ಜೈಶಂಕರ್‌

ನೇಪಾಳ ಭೀಕರ ಪ್ರವಾಹ: ಏರುತ್ತಲೇ ಇದೆ ಸಾವಿನ ಸಂಖ್ಯೆ, ಇನ್ನೂ 977ಮಂದಿ ನಾಪತ್ತೆ

ಮುಂದಿನ ಸುದ್ದಿ
Show comments