Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ 25 ಸೀಟು ಗೆಲ್ಲುತ್ತದೆಯೋ ಕಾದು ನೋಡಿ:ಸಿಎಂಗೆ ಕುಮಾರಸ್ವಾಮಿ ಟಾಂಗ್

ಕಾಂಗ್ರೆಸ್‌ 25 ಸೀಟು ಗೆಲ್ಲುತ್ತದೆಯೋ ಕಾದು ನೋಡಿ:ಸಿಎಂಗೆ ಕುಮಾರಸ್ವಾಮಿ ಟಾಂಗ್
ಹಾಸನ , ಮಂಗಳವಾರ, 3 ಏಪ್ರಿಲ್ 2018 (13:04 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಕೇವಲ 25 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಬಹುದು ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮೊದ್ಲು ಕಾಂಗ್ರೆಸ್ 25 ಸೀಟುಗಳಲ್ಲಿ ಜಯಗಳಿಸುತ್ತದೆಯೋ ಕಾದು ನೋಡಿ ಎಂದು ತಿರುಗೇಟು ನೀಡಿದ್ದಾರೆ. 
ಹಾಸನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿ ಸಿದ್ದರಾಮಯ್ಯ ಸ್ಥಿತಿಯೇ ಹೀನಾಯವಾಗಿದೆ. ಮೈಸೂರಿನಲ್ಲೆ 5 ದಿನಗಳಿಂದ ಟಿಕಾಣಿ ಹೂಡುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.
 
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಕಳೆದ ಬಾರಿಯೇ ಗೆಲ್ಲಬೇಕಿತ್ತು. ನಾನು ತೆಗೆದುಕೊಂಡ ಆಂತರಿಕ ತಪ್ಪು ನಿರ್ಧಾರದಿಂದ ಕಳೆದ ಬಾರಿ ಚುನಾವಣೆ ಸೋತೆವು. ಸಾಲಮನ್ನ ಮಾಡ್ತಿವಿ ಅಂತ ಸರ್ಕಾರ ರೈತರಿಗೆ ಟೋಪಿ ಹಾಕೋ ಕೆಲಸ ಮಾಡಿದೆ. ಮೂಂದಿನ ಜೂನ್ ಗೆ ಉಳಿದ ಹಣ ಕೊಡ್ತಿವಿ ಅಂತಾರೆ
ಮುಂದೆ ಹಣ ಕೊಡೊಕೆ ಇವ್ರೇ ಗೂಟ ಹೊಡ್ಕೊಂಡು ಕೂತಿರ್ತಾರ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ರಾಜಕೀಯ ಶಕ್ತಿ ದುರುಪಯೋಗ ಮಾಡುವ ಕೆಲಸವನ್ನ ರಾಮನಗರದಲ್ಲಿ ಮಾಡಿಲ್ಲ. ರಾಮನಗರದಲ್ಲಿ ಜನ 50ಸಾವಿರ ಮುನ್ನಡೆ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದು ದೇವೇಗೌಡರ ಮಡಿಲಿಗೆ ಸೇರಿಸೊದು ನನ್ನ ಮುಂದಿನ ಗುರಿಯಾಗಿದೆ ಎಂದರು. 
 
ನಮ್ಮ ಪಕ್ಷವನ್ನ ಕುಟುಂಬ ಪಕ್ಷ ಅಂತಾರೆ. ಆದ್ರೆ ಸಿಎಮ್ ಸಿದ್ದರಾಮಯ್ಯ ಮಗ ಏನು ಮಾಡಿದಾರೆ ಅಂತ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಯಡಿಯೂರಪ್ಪ ಪುತ್ರ ಏನು ಮಾಡಿದ್ದಾರೆ ಅಂತ ಮೈಸೂರಲ್ಲಿ ಸ್ಪರ್ಧಿಸಲು ಬಂದಿದ್ದಾರೆ. ಅವ್ರು ಮಾಡ್ತಿರೊದು ಕುಟುಂಬ ರಾಜಕೀಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
 
ಕುಮಾರಸ್ವಾಮಿಯಿಂದ ದೇವೇಗೌಡರ ರಾಜಕೀಯಕ್ಕೆ ಪೆಟ್ಟು ಬಿತ್ತು ಅನ್ನೊ ಕೂಗು ಕೇಳಿಬಂದಿದೆ  ಅದನ್ನ ನಿವಾರಿಸಲು ಪ್ರಯತ್ನ ಮಾಡುವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಪೋಟ.