Webdunia - Bharat's app for daily news and videos

Install App

ಮಲೇರಿಯಾಗೆ ಅಂತೂ ಇಂತೂ ಸಿಕ್ತು ಲಸಿಕೆ..!

Webdunia
ಗುರುವಾರ, 7 ಅಕ್ಟೋಬರ್ 2021 (14:45 IST)
ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಸಾಮಾನ್ಯ ಸೊಳ್ಳೆಯಿಂದ ಹರಡುವ ರೋಗವಾದ ಮಲೇರಿಯಾ ವಿರುದ್ಧ ವಿಶ್ವದ ಮೊದಲ ಲಸಿಕೆಯ "ವ್ಯಾಪಕ ಬಳಕೆಯನ್ನು" ಅನುಮತಿಸಿದೆ.

ಮಲೇರಿಯಾದಿಂದಲೇ ಪ್ರತಿ ವರ್ಷ ನಾಲ್ಕು ಲಕ್ಷಕ್ಕೂ ಹೆಚ್ಚು ಜೀವಗಳು ಬಲಿಯಾಗುತ್ತಿವೆ. ಈ ಹಿನ್ನೆಲೆ ಅಭಿವೃದ್ಧಿಪಡಿಸಿದ, RTS, S/AS01 ಎಂದು ಕರೆಯಲ್ಪಡುವ ಲಸಿಕೆಗೆ ಒಪ್ಪಿಗೆ ದೊರೆತಿದೆ. ಈ ಲಸಿಕೆಯನ್ನು ಪೈಲೆಟ್ ಕಾರ್ಯಕ್ರಮದ ಭಾಗವಾಗಿ ಈಗಾಗಲೇ ಘಾನಾ, ಕೀನ್ಯಾ ಮತ್ತು ಮಲಾವಿಯಲ್ಲಿ ಸುಮಾರು 8 ಲಕ್ಷ ಮಕ್ಕಳಿಗೆ ನೀಡಲಾ ಗಿದೆ. ಈಗ WHOಅನುಮೋದನೆ ನೀಡಿರುವುದರಿಂದ ಪೈಲಟ್ ಕಾರ್ಯಕ್ರಮದ ಹೊರಗೂ ಈ ಲಸಿಕೆಯ ಬಳಕೆಗೆ ದಾರಿ ಮಾಡಿಕೊಡುತ್ತದೆ. ಅಂದರೆ, ಮಲೇರಿಯಾ ವ್ಯಾಪಕವಾಗಿ ಹರಡಿದೆ ಎಂದು ತಿಳಿದಿರುವ ಎಲ್ಲ ಪ್ರದೇಶಗಳಲ್ಲಿ ನೀಡಲಾಗುತ್ತದೆ.
ಆದರೆ, ಬ್ರ್ಯಾಂಡ್ ಮಾಸ್ಕ್ವಿರಿಕ್ಸ್ನಿಂದ ಕರೆಯಲ್ಪಡುವ ಆರ್ಟಿಎಸ್ಎಸ್/ಎಎಸ್01 ಲಸಿಕೆ, ಮಲೇರಿಯಾದ ವಿರುದ್ಧ ಜಾಗತಿಕ ಜನಸಂಖ್ಯೆಯ ಪರಿಣಾಮಕಾರಿ ರೋಗನಿರೋಧಕತೆಯ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಈ ಲಸಿಕೆಯು ಕೇವಲ 30 ಪ್ರತಿಶತ ಪ್ರಕರಣಗಳಲ್ಲಿ ಮಲೇರಿಯಾದ ತೀವ್ರತರವಾದ ಪ್ರಕರಣಗಳನ್ನು ತಡೆಯಲು ಸಮರ್ಥವಾಗಿದೆ ಮತ್ತು ಹೆಚ್ಚು ಪರಿಣಾಮಕಾರಿ ಲಸಿಕೆಗಳ ಅನ್ವೇಷಣೆ ಇನ್ನೂ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಮಲೇರಿಯಾ ಅತಿದೊಡ್ಡ ಕೊಲೆಗಾರ..!
ಮಲೇರಿಯಾ ಮಾನವ ಇತಿಹಾಸದಲ್ಲಿ ಮಾರಣಾಂತಿಕ ರೋಗಗಳಲ್ಲಿ ಒಂದಾಗಿದ್ದು, ಮಿಲಿಯನ್ಗಟ್ಟಲೆ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈಗಲೂ, WHOಅಂಕಿಅಂಶಗಳ ಪ್ರಕಾರ, ಈ ರೋಗವು ಪ್ರತಿ ವರ್ಷ 4 ಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತದೆ. ಇನ್ನು, ಇದಕ್ಕೂ 20 ವರ್ಷಗಳ ಹಿಂದೆ ಈ ರೋಗಕ್ಕೆ ಸುಮಾರು 2 ಪಟ್ಟು ಜನರು ಸಾವಿಗೀಡಾಗುತ್ತಿದ್ದರು.
ಆಫ್ರಿಕಾದಲ್ಲಿ ಮಲೇರಿಯಾ ಅತ್ಯಂತ ಸ್ಥಳೀಯವಾಗಿದ್ದು, ನೈಜೀರಿಯಾ, ಕಾಂಗೋ, ಟಾಂಜಾನಿಯಾ, ಮೊಜಾಂಬಿಕ್, ನೈಜರ್ ಮತ್ತು ಬುರ್ಕಿನಾ ಫಾಸೊ ದೇಶಗಳು ಸೇರಿ ಜಗತ್ತಿನ ಅರ್ಧದಷ್ಟು ಸಾವುಗಳಿಗೆ ಕಾರಣವಾಗಿದೆ. ಈ ಕಾಯಿಲೆಯಿಂದ ತೀವ್ರವಾಗಿ ಬಾಧಿತವಾದ ದೇಶಗಳಲ್ಲಿ ಭಾರತವೂ ಒಂದು. ಅದೃಷ್ಟವಶಾತ್, ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಮಲೇರಿಯಾದಿಂದ ಉಂಟಾಗುವ ಸಾವುಗಳು ತೀವ್ರವಾಗಿ ಕಡಿಮೆಯಾಗಿದೆ. ಅಧಿಕೃತವಾಗಿ ಈಗ ಕೇವಲ ನೂರಾರು ಸಂಖ್ಯೆಯಲ್ಲಿವೆ.
ಆದರೆ ಸೋಂಕುಗಳು ಈ ಕಾಯಿಲೆಯಿಂದ ತೀವ್ರವಾಗಿ ಬಾಧಿತವಾದ ದೇಶಗಳಲ್ಲಿ ಭಾರತವೂ ಒಂದು. ಕಳೆದ ಕೆಲವು ವರ್ಷಗಳಲ್ಲಿ ಮಲೇರಿಯಾದಿಂದ ಉಂಟಾಗುವ ಸಾವುಗಳು ತೀವ್ರವಾಗಿ ಕಡಿಮೆಯಾಗಿವೆ - ಅಧಿಕೃತವಾಗಿ ಇವುಗಳು ಈಗ ಕೇವಲ ನೂರಾರು ಸಂಖ್ಯೆಯಲ್ಲಿವೆ - ಆದರೆ ಸೋಂಕುಗಳು ಮಿಲಿಯನ್ಗಟ್ಟಲೆ ಮುಂದುವರಿದಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments