Publish Date: Tue, 03 Jan 2023 (10:52 IST)
Updated Date: Tue, 03 Jan 2023 (11:29 IST)
ವಿಜಯಪುರ : ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಕರ್ನಾಟಕ, ಭಾರತದ ಅತ್ಯುತ್ತಮ ಆಧ್ಯಾತ್ಮಿಕ ಚಿಂತಕರು ಮತ್ತು ಪ್ರೇರಕ ಭಾಷಣಕಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತರುತ್ತಿತ್ತು ಮತ್ತು ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತಿತ್ತು.
ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ಅವರು 1948ರಲ್ಲಿ ವಿಜಯಪುರ ಜಿಲ್ಲೆಯ ತಾಳ ಬಿಜ್ಜರಗಿಯಲ್ಲಿ ಜನಿಸಿದರು. ಸ್ವಾಮೀಜಿಯನ್ನು ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದರು. 19ನೇ ವಯಸ್ಸಿನಲ್ಲಿ, ಸ್ವಾಮೀಜಿಯವರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತತ್ವ ಶಿರೋಮಣಿ ಪುಸ್ತಕವನ್ನು ಬರೆದರು.
ನಡೆದಾರುವ ನಾರಾಯಣ ಎಂದು ಕರೆಯಲ್ಪಡುವ ಸ್ವಾಮೀಜಿ ದೈವಭಕ್ತಿಯ ನಿಜವಾದ ಮತ್ತು ಜೀವಂತ ಉದಾಹರಣೆಯಾಗಿದ್ದರು. ಈ ಹೆಸರಿನ ಅರ್ಥ ಜೀವಂತ ದೇವರು ಹಾಗೂ ಸ್ವಾಮೀಜಿ ಸಮಾಜದ ಉನ್ನತಿ ಮತ್ತು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು.