Webdunia - Bharat's app for daily news and videos

Install App

ತೆಲಂಗಾಣದ ಟಿಆರ್ ಎಸ್ ಪಕ್ಷವನ್ನು ಪ್ರಧಾನಿ ಮೋದಿ ಹೊಗಳಿದುದರ ಹಿಂದಿದೆಯಾ ಭಾರೀ ಲೆಕ್ಕಾಚಾರ?

Webdunia
ಭಾನುವಾರ, 22 ಜುಲೈ 2018 (09:36 IST)
ನವದೆಹಲಿ: ಅವಿಶ್ವಾಸ ಮಂಡಳಿ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯನ್ನು ದೂರಿ, ತೆಲಂಗಾಣದ ಟಿಆರ್ ಎಸ್ ನ್ನು ಪ್ರಧಾನಿ ಮೋದಿ ಹೊಗಳಿ ದೊಡ್ಡ ರಾಜಕೀಯ ದಾಳ ಉರುಳಿಸಿದರೇ?

ಟಿಡಿಪಿಯ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ಸಿಗದ ಹಿನ್ನಲೆಯಲ್ಲಿ ಈಗ ಎನ್ ಡಿಎ ಜತೆಗೆ ಮುನಿಸಿಕೊಂಡಿದ್ದಾರೆ.  ಹೀಗಾಗಿ ಅವರ ನೇತೃತ್ವದ ಟಿಡಿಪಿಯ ಎದುರಾಳಿ ತೆಲಂಗಾಣದ ಟಿಆರ್ ಎಸ್ ಪಕ್ಷವನ್ನು ಹೊಗಳುವ ಮೂಲಕ ಮೋದಿ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಟಿಡಿಪಿಗೆ ಸಿಗಬಹುದಾಗಿದ್ದ ದೊಡ್ಡ ಬೆಂಬಲವನ್ನು ಮುರಿಯಲು ಯತ್ನಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅತ್ತ ಟಿಡಿಪಿ ಕಾಂಗ್ರೆಸ್ ಜತೆಗೂ ಮೈತ್ರಿ ಮಾಡಿಕೊಳ್ಳಲು ಪೂರ್ಣ ಮನಸ್ಸು ಹೊಂದಿಲ್ಲ. ಕಾಂಗ್ರೆಸ್ಸೇತರ ಜಾತ್ಯಾತೀತ ಪಕ್ಷಗಳ ಬೆಂಬಲ ಕೋರುತ್ತಿದೆ. ಹೀಗಿರುವಾಗ ತೆಲಂಗಾಣದ ಪ್ರಾದೇಶಕ ಪಕ್ಷ, ಸಿಎಂ ಚಂದ್ರಶೇಖರ್ ರಾವ್ ಅವರ ನೇತೃತ್ವದ ಟಿಆರ್ ಎಸ್ ಬಲ ಸಿಗದಂತೆ ಮಾಡಲು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಟಿಆರ್ ಎಸ್ ನ್ನು ಹೊಗಳುವ ಕೆಲಸ ಮಾಡಿದರೇ ಎಂಬ ಚರ್ಚೆಗಳು ಇದೀಗ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ. ಕರ್ನಾಟಕದಲ್ಲೂ ಹಿಂದೆ ಜೆಡಿಎಸ್ ನ ದೇವೇಗೌಡರನ್ನು ಹೊಗಳಿ ಮೋದಿ ಇದೇ ತಂತ್ರಗಾರಿಕೆ ಮಾಡಿದ್ದರು. ಆದರೆ ಇಲ್ಲಿ ಸಖ್ಯ ಸಾಧ್ಯವಾಗದಿದ್ದರೂ ದೇವೇಗೌಡರು ಮೋದಿ ಬಗ್ಗೆ ಮೃದು ಧೋರಣೆ ತಾಳುವಂತೆ ಮಾಡಲು ಯಶಸ್ವಿಯಾಗಿದ್ದರು. ಈಗ ಆಂಧ್ರದಲ್ಲೂ ಅದೇ ತಂತ್ರಗಾರಿಕೆಗೆ ಮೋದಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಲಪಾಡ್‌, ಸಿಎಂ ಡಿಕೆ ಶಿವಕುಮಾರ್ ದಂಪತಿ, ಕಿಚ್ಚ ಸುದೀಪ್ ಭಾಗಿ

ರಕ್ಷಣೆ ನೀಡಬೇಕಿದ್ದ ಸಿಐಎಸ್‌ಎಫ್‌ ಸಿಬ್ಬಂದಿಯ ಕಾಲರ್ ಹಿಡಿದ ಪ್ರಯಾಣಿಕರು, ನಿಜವಾದ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ, Video

ಸಂಸ್ಥೆ ಎಷ್ಟೇ ದೊಡ್ಡದಾಗಿದ್ದರೂ, ಯಾವುದೇ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ

ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಹಸು, ನವಿಲುಗಳಿಗೆ ಆಹಾರ ತಿನ್ನಿಸಿದ ಪ್ರಧಾನಿ ಮೋದಿ: ವಿಡಿಯೊ ವೈರಲ್‌

ಪವಿತ್ರ ಗೀತೆಗೆ ಮಾಡಿದ ಅವಮಾನ ದೇಶದ ಜನ ಕ್ಷಮಿಸಲ್ಲ: ಸೋನಿಯಾ ಗಾಂಧಿ ವಿರುದ್ಧ ಗುಡುಗಿದ ಅಮಿತ್ ಶಾ

ಮುಂದಿನ ಸುದ್ದಿ
Show comments