Webdunia - Bharat's app for daily news and videos

Install App

ತೆಲಂಗಾಣದ ಟಿಆರ್ ಎಸ್ ಪಕ್ಷವನ್ನು ಪ್ರಧಾನಿ ಮೋದಿ ಹೊಗಳಿದುದರ ಹಿಂದಿದೆಯಾ ಭಾರೀ ಲೆಕ್ಕಾಚಾರ?

Webdunia
ಭಾನುವಾರ, 22 ಜುಲೈ 2018 (09:36 IST)
ನವದೆಹಲಿ: ಅವಿಶ್ವಾಸ ಮಂಡಳಿ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯನ್ನು ದೂರಿ, ತೆಲಂಗಾಣದ ಟಿಆರ್ ಎಸ್ ನ್ನು ಪ್ರಧಾನಿ ಮೋದಿ ಹೊಗಳಿ ದೊಡ್ಡ ರಾಜಕೀಯ ದಾಳ ಉರುಳಿಸಿದರೇ?

ಟಿಡಿಪಿಯ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ಸಿಗದ ಹಿನ್ನಲೆಯಲ್ಲಿ ಈಗ ಎನ್ ಡಿಎ ಜತೆಗೆ ಮುನಿಸಿಕೊಂಡಿದ್ದಾರೆ.  ಹೀಗಾಗಿ ಅವರ ನೇತೃತ್ವದ ಟಿಡಿಪಿಯ ಎದುರಾಳಿ ತೆಲಂಗಾಣದ ಟಿಆರ್ ಎಸ್ ಪಕ್ಷವನ್ನು ಹೊಗಳುವ ಮೂಲಕ ಮೋದಿ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಟಿಡಿಪಿಗೆ ಸಿಗಬಹುದಾಗಿದ್ದ ದೊಡ್ಡ ಬೆಂಬಲವನ್ನು ಮುರಿಯಲು ಯತ್ನಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅತ್ತ ಟಿಡಿಪಿ ಕಾಂಗ್ರೆಸ್ ಜತೆಗೂ ಮೈತ್ರಿ ಮಾಡಿಕೊಳ್ಳಲು ಪೂರ್ಣ ಮನಸ್ಸು ಹೊಂದಿಲ್ಲ. ಕಾಂಗ್ರೆಸ್ಸೇತರ ಜಾತ್ಯಾತೀತ ಪಕ್ಷಗಳ ಬೆಂಬಲ ಕೋರುತ್ತಿದೆ. ಹೀಗಿರುವಾಗ ತೆಲಂಗಾಣದ ಪ್ರಾದೇಶಕ ಪಕ್ಷ, ಸಿಎಂ ಚಂದ್ರಶೇಖರ್ ರಾವ್ ಅವರ ನೇತೃತ್ವದ ಟಿಆರ್ ಎಸ್ ಬಲ ಸಿಗದಂತೆ ಮಾಡಲು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಟಿಆರ್ ಎಸ್ ನ್ನು ಹೊಗಳುವ ಕೆಲಸ ಮಾಡಿದರೇ ಎಂಬ ಚರ್ಚೆಗಳು ಇದೀಗ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ. ಕರ್ನಾಟಕದಲ್ಲೂ ಹಿಂದೆ ಜೆಡಿಎಸ್ ನ ದೇವೇಗೌಡರನ್ನು ಹೊಗಳಿ ಮೋದಿ ಇದೇ ತಂತ್ರಗಾರಿಕೆ ಮಾಡಿದ್ದರು. ಆದರೆ ಇಲ್ಲಿ ಸಖ್ಯ ಸಾಧ್ಯವಾಗದಿದ್ದರೂ ದೇವೇಗೌಡರು ಮೋದಿ ಬಗ್ಗೆ ಮೃದು ಧೋರಣೆ ತಾಳುವಂತೆ ಮಾಡಲು ಯಶಸ್ವಿಯಾಗಿದ್ದರು. ಈಗ ಆಂಧ್ರದಲ್ಲೂ ಅದೇ ತಂತ್ರಗಾರಿಕೆಗೆ ಮೋದಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments