Select Your Language

Notifications

webdunia
webdunia
webdunia
Sunday, 13 April 2025
webdunia

ಬಿಜೆಪಿಯವರಿಗೆ ಸರಿಯಾಗಿ ಪೆಂಡಾಲ್ ಹಾಕಕ್ಕೂ ಬರಲ್ವಾ? ಮಮತಾ ಬ್ಯಾನರ್ಜಿ ಲೇವಡಿ

ಮಮತಾ ಬ್ಯಾನರ್ಜಿ
ಕೋಲ್ಕೊತ್ತಾ , ಭಾನುವಾರ, 22 ಜುಲೈ 2018 (09:24 IST)
ಕೋಲ್ಕೊತ್ತಾ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪೆಂಡಾಲ್ ಕುಸಿದ ಘಟನೆಯನ್ನು ನೆನಪಿಸಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಪ್ರಧಾನಿ ಕೋಲ್ಕೊತ್ತಾದ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದಾಗ ಪೆಂಡಾಲ್ ಕುಸಿದು 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಿನ್ನೆ ತಮ್ಮ ಪಕ್ಷದ ಸಮಾವೇಶವೊಂದರಲ್ಲಿ ಮಾತನಾಡಿದ ಮಮತಾ ಇದೇ ಘಟನೆಯನ್ನು ನೆನಪಿಸಿ ಬಿಜೆಪಿಯವರಿಗೆ ಸರಿಯಾಗಿ ಪೆಂಡಾಲ್ ಹಾಕಲೂ ಬರಲ್ವಾ ಎಂದು ಲೇವಡಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಸಮಾವೇಶದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಶಾಕ್ ಕಾದಿದೆ. ಸಂಸತ್ತಿನಲ್ಲಿ 100 ಸೀಟು ಕೂಡಾ ಗೆಲ್ಲಲ್ಲ ಎಂದಿದ್ದಾರೆ.

ಅವಿಶ್ವಾಸ ಮತದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಇದು ಸಂಸತ್ತಿನ ಒಳಗಿನ ಗೆಲುವಷ್ಟೇ. ಹೊರಗೆ ಬಂದರೆ ಅವರಿಂದ ಬಹುಮತದ ಗೆಲುವು ಸಾಧ್ಯವಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಅಪ್ಪಿಕೊಂಡ ಪುತ್ರ ರಾಹುಲ್ ಗಾಂಧಿಗೆ ಸೋನಿಯಾ ಗಾಂಧಿ ಹೇಳಿದ್ದೇನು ಗೊತ್ತಾ?!