Webdunia - Bharat's app for daily news and videos

Install App

ಸತತ 6ನೇ ದಿನ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಕೇಸ್; ಒಂದೊಂದೆ ರಾಜ್ಯಗಳು ಲಾಕ್ಡೌನ್!

Webdunia
ಸೋಮವಾರ, 2 ಆಗಸ್ಟ್ 2021 (19:33 IST)
ನವದೆಹಲಿ(ಆ.02): ಭಾರತ ಇದೀಗ 3ನೇ ಅಲೆ ಭೀತಿಗೆ ತುತ್ತಾಗಿದೆ. ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಸತತ 6ನೇ ದಿನ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇದು ಆತಂಕ ಹೆಚ್ಚಿಸಿದೆ. ಇದರಲ್ಲಿ ಅರ್ಧಕರ್ಧ ಕೇಸ್ ಕೇರಳದಲ್ಲೇ ದಾಖಲಾಗಿದೆ. ಇದರಿಂದ ಕರ್ನಾಟಕದ ಆತಂಕವೂ ಹೆಚ್ಚಾಗಿದೆ.

•ಭಾರತದಲ್ಲಿ ಕೊರೋನಾ 3ನೇ ಅಲೆ ಭೀತಿ ಹೆಚ್ಚಾಗುತ್ತಿದೆ
•ಪ್ರತಿ ದಿನ ದಾಖಲಾಗುತ್ತಿದೆ 40ಸಾವಿರಕ್ಕೂ ಹೆಚ್ಚು ಕೇಸ್
•ಕರ್ನಾಟಕಕ್ಕೆ ಆತಂಕ ತಂದ ಕೇರಳ ಕೊರೋನಾ
•ಭಾರತದಲ್ಲಿ 47.22 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ
ತಜ್ಞರು ಎಚ್ಚರಿಸಿದ 3ನೇ ಅಲೆ ವರದಿ ನಿಜವಾಗುತ್ತಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ಕೊರೋನಾ 3ನೇ ಅಲೆ ಅಪ್ಪಳಿಸಲಿದ್ದು, ಅಕ್ಟೋಬರ್ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ವರದಿ ನೀಡಲಾಗಿತ್ತು. ಈ ವರದಿಯಂತೆ ಜುಲೈ ಅಂತ್ಯದಿಂದ ಕೊರೋನಾ ಪ್ರಕರಣ ಹೆಚ್ಚಾಗತೊಡಗಿದೆ. ಇದೇ ರೀತಿ ಮುಂದುವರಿದರೆ ಅಕ್ಟೋಬರ್ ತಿಂಗಳಿಗೆ ಗರಿಷ್ಠವಾಗಲಿದೆ.
ಭಾರತದಲ್ಲಿ ಜುಲೈ 11ರಂದು 32 ಸಾವಿರ ಕೊರೋನಾ ಪ್ರಕರಣ ದಾಖಲಾಗಿತ್ತು. ಇಷ್ಟೆ ಅಲ್ಲ ಅಲ್ಲೀವರೆಗೆ ಇಳಿಕೆಯಲ್ಲಿದ್ದ ಕೊರೋನಾ ಪ್ರಕರಣಗಳು ನಿಧಾನವಾಗಿ ಏರಿಕೆ ಕಾಣತೊಡಗಿದೆ. ಇದೀಗ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 40,134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಕೇರಳದಲ್ಲಿ ಪ್ರತಿ ದಿನ 23,000ಕ್ಕಿಂತ ಹೆಚ್ಚಿನ ಕೊರೋನಾ ಪ್ರಕರಣ ದಾಖಲಾಗುತ್ತಿದೆ. ಹೀಗಾಗಿ ಕೇರಳದಲ್ಲಿ ಮತ್ತೆ ಲಾಕ್ಡೌನ್ ಮೊರೆ ಹೋಗಲಾಗಿದೆ. ಇತ್ತ ತಮಿಳುನಾಡಿನಲ್ಲೂ ಲಾಕ್ಡೌನ್ ನಿರ್ಬಂಧ ವಿಸ್ತರಿಸಲಾಗಿದೆ. ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಕೊರೋನಾ ಪ್ರಕರಣ ಹಚ್ಚಾಗಿದೆ.
ಕರ್ನಾಟಕದಲ್ಲಿ ಸರಾಸರಿ 2,000 ಕೊರೋನಾ ಕೇಸ್ ಪ್ರತಿ ದಿನ ದಾಖಲಾಗುತ್ತಿದೆ. ನೂತನ ಸಿಎಂ ಬಸವಾಜ ಬೊಮ್ಮಾಯಿ ಈಗಾಗಲೇ ಗಡಿ ಜಿಲ್ಲೆಗಳ ಜೊತೆ ಸಭೆ ನಡೆಸಿದ್ದು, ಕಠಿಣ ನಿರ್ಬಂಧಕ್ಕೆ ಸೂಚಿಸಲಾಗಿದೆ.
ಭಾರತದಲ್ಲಿ ಭರದಿಂದ ಸಾಗಿರುವ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ 47.2 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ ಒಟ್ಟು 47,22,23,639 ಡೋಸ್ ಲಸಿಕೆ ನೀಡಲಾಗಿದೆ.  ಇಂದು 44 ಲಕ್ಷ ಡೋಸ್ ಲಸಿಕೆ ನೀಡೋ ಮೂಲಕ ದಾಖಲೆ ಬರೆಯಲಾಗಿದೆ.
ದೇಶದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,08,57,467 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ 36,946 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಕೆ ದರ ಪ್ರಸ್ತುತ 97.35%ಗೆ ಸುಧಾರಣೆ ಕಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಅಹ್ಮದಾಬಾದ್ ನಲ್ಲಿ ರಥಯಾತ್ರೆ ವೇಳೆ ಯದ್ವಾ ತದ್ವಾ ಓಡಿದ ಆನೆ

Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ವಿಲ್ ಬರೆಯುವುದು ಹೇಗೆ, ಯಾಕಾಗಿ ಬರೆಯಬೇಕು ಇಲ್ಲಿದೆ ವಿವರ

ಈ ವಿಡಿಯೋ ನೋಡ್ತಿದ್ದ ಹಾಗೇ ನೀವು ಸಡನ್ ಶಾಕ್ ಆಗೋದು ಗ್ಯಾರಂಟಿ

ಮುಂದಿನ ಸುದ್ದಿ
Show comments