Select Your Language

Notifications

webdunia
webdunia
webdunia
webdunia

ಸಾರಿಗೆ ಮುಷ್ಕರಕ್ಕೆ ಬೆಂಗಳೂರು ಕ್ಯಾರೇ ಎನ್ನಲಿಲ್ಲ

ಸಾರಿಗೆ ಮುಷ್ಕರಕ್ಕೆ ಬೆಂಗಳೂರು ಕ್ಯಾರೇ ಎನ್ನಲಿಲ್ಲ
ಬೆಂಗಳೂರು , ಮಂಗಳವಾರ, 7 ಆಗಸ್ಟ್ 2018 (08:55 IST)
ಬೆಂಗಳೂರು: ಮೋಟಾರು ವಾಹನ ಮಸೂದೆ ತಿದ್ದುಪಡಿ ವಿರೋಧಿಸಿ ಇಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ ಕರೆ ನೀಡಿರುವ ಬಂದ್ ಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
 

ಬಸ್, ಆಟೋ ಚಾಲಕರೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಬೆಳಿಗ್ಗೆ ಎಂದಿನಂತೆ ಬಿಎಂಟಿಸಿ, ಕೆಎಸ್ ಆರ್ ಟಿಸಿ, ಮೆಟ್ರೋ ಸಂಚಾರ ನಡೆದಿದೆ. ಇದರಿಂದಾಗಿ ಸಾರ್ವಜನಿಕರು ನಿರಾತಂಕವಾಗಿ ತಮ್ಮ ಗಮ್ಯ ತಲುಪಲು ಸಾಧ್ಯವಾಗಿದೆ.

ಬೆಂಗಳೂರು ಮಾತ್ರವಲ್ಲದೆ, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲೂ ಸಾರಿಗೆ ಸಂಚಾರ ಎಂದಿನಂತೇ ನಡೆದಿದೆ. ಬಂದ್ ಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿಗೆ ಬೆದರಿಕೆ ಹಾಕಿದ ಭೂಪ!