Publish Date: Fri, 28 Sep 2018 (08:46 IST)
Updated Date: Fri, 28 Sep 2018 (08:47 IST)
ಬೆಂಗಳೂರು: ಆನ್ ಲೈನ್ ನಲ್ಲಿ ಔಷಧ ಮಾರಾಟ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆ ವಿರೋಧಿಸಿ ಇಂದು ರಾಜ್ಯಾದ್ಯಂತ ಖಾಸಗಿ ಮೆಡಿಕಲ್ ಮುಷ್ಕರ ನಡೆಯುತ್ತಿದೆ.
ಹೀಗಾಗಿ ಇಂದು ದಿನವಿಡೀ ಖಾಸಗಿ ಔಷಧ ಮಳಿಗೆಗಳು ಮುಚ್ಚಿರಲಿವೆ. ಹೀಗಾಗಿ ಅಗತ್ಯ ಔಷಧಗಳು ಬೇಕಾದರೆ ಸರ್ಕಾರಿ ಔಷಧ ಮಳಿಗೆಗಳಿಗೆ ತೆರಳಲೇಬೇಕು. ಇದರಿಂದ ಔಷಧಗಳ ಲಭ್ಯತೆಯಲ್ಲೂ ಕೊರತೆ ಉಂಟಾಗುವ ಭೀತಿ ಎದುರಾಗಿದೆ.
ರಾಜ್ಯದಲ್ಲಿ ಸುಮಾರು 24 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ ಗಳಿದ್ದು, ಇವೆಲ್ಲವೂ ನಿನ್ನೆ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿಯವರೆಗೆ ತೆರೆಯುವುದಿಲ್ಲ. ಇಂದು ನಗರದ ಪುರಭವನದ ಎದುರು ಔಷಧ ಮಳಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.