Webdunia - Bharat's app for daily news and videos

Install App

ಮಂಗಳೂರು ಮಳೆ ಬಗ್ಗೆ ಸಿಎಂ ಎಚ್ ಡಿಕೆ, ಬಿಎಸ್ ವೈ ಮತ್ತಿತರರು ಏನು ಹೇಳಿದ್ದಾರೆ ನೋಡಿ

Webdunia
ಬುಧವಾರ, 30 ಮೇ 2018 (10:24 IST)
ಮಂಗಳೂರು: ಪೂರ್ವ ಮುಂಗಾರಿನ ಅಬ್ಬಾರಕ್ಕೆ ತತ್ತರಿಸಿರುವ ಮಂಗಳೂರಿನ ಜನತೆಗೆ ಸಿಎಂ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತಿತರು ಸಹಾಯ ಹಸ್ತ ಚಾಚಿದ್ದಾರೆ.

ಮಹಾ ಮಳೆಯಿಂದ ಮಂಗಳೂರು ಸಂಪೂರ್ಣ ಜಲಾವೃತಗೊಂಡ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಸಿಎಂ ಕುಮಾರಸ್ವಾಮಿ, ಅಗತ್ಯ ಪರಿಹಾರ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೂಡಾ ಮಹಾ ಮಳೆಯ ಬಗ್ಗೆ ಟ್ವೀಟ್ ಮಾಡಿದ್ದು, ಕೇಂದ್ರ ಗೃಹಸಚಿವರಿಗೆ ವಿಷಯ ತಿಳಿಸಿದ್ದೇನೆ. ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದಿದ್ದಾರೆ.

ನಟ, ಬಿಜೆಪಿ ನಾಯಕ ಜಗ್ಗೇಶ್ ಕೂಡಾ ತಮ್ಮ ಟ್ವಿಟರ್ ಮೂಲಕ ಮಳೆಗೆ ಸಂಕಷ್ಟಕ್ಕೀಡಾಗಿರುವ ಜನರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದು, ನಮ್ಮಿಂದ ಸಾಧ್ಯವಾದ ಎಲ್ಲಾ ಸಹಾಯ ಮಾಡೋಣ ಎಂದು ಕರೆಕೊಟ್ಟಿದ್ದಾರೆ.

ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಪರಿಹಾರ ಕಾರ್ಯ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದುತ್ವದ ಬಗ್ಗೆ ಮಾತನಾಡುವ ಸಿಎಂ, ಗೋ ಕಳ್ಳಸಾಗಾಟವನ್ನು ಗಂಭೀರವಾಗಿ ಪರಿಗಣಿಸಿ: ಬಿ.ವೈ.ವಿಜಯೇಂದ್ರ

ಅನಾಕೊಂಡಾ ಗಾತ್ರದ ಹೆಬ್ಬಾವು ಕಂಡು ಶಾಕ್ ಆದ ಗ್ರಾಮಸ್ಥರು, Video

ಗೋಲ್ ಗಪ್ಪಾ ತಿನ್ನುವ ಆಸೆಯಿಂದ ಗಂಡನ ಬಳಿ ಹಠ ಹಿಡಿದು ಹೋದವಳ ಬಾಯಿಯೇ ಕೊನೆಗೆ ಹೀಗೆ ಆಗೋದಾ: Video

ಕಂತು ಕಟ್ಟದಿದ್ದರೆ ಎಮ್ಮೆ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ ಬ್ಯಾಂಕ್ ನವರಿಗೆ ರೈತ ಕೊಟ್ಟ ಶಾಕ್ ಜೀವಮಾನದಲ್ಲಿ ಮರೆಯಲ್ಲ Video

ವಂದೇ ಮಾತರಂ ಹಾಡುವಾಗ ಸೋನಿಯಾ ಗಾಂಧಿ ಕುರ್ಚಿ ಕೇಳಿದ್ದು ಅಂತೇ

ಮುಂದಿನ ಸುದ್ದಿ
Show comments