Webdunia - Bharat's app for daily news and videos

Install App

‘ನನ್ನ ಪ್ರಕಾರ ಬಿಜೆಪಿ ಅನ್ನೋದು ಈ ದೇಶದಲ್ಲಿರುವ ದೊಡ್ಡ ರೋಗ, ಬರುವ ದಿನಗಳಲ್ಲಿ ಈ ದೊಡ್ಡ ರೋಗ ಇರಲ್ಲ’-ಪ್ರಕಾಶ್ ರೈ

Webdunia
ಗುರುವಾರ, 12 ಏಪ್ರಿಲ್ 2018 (14:13 IST)
ಬಾಗಲಕೋಟೆ : ನನ್ನ ಪ್ರಕಾರ ಬಿಜೆಪಿ ಅನ್ನೋದು ಈ ದೇಶದಲ್ಲಿರುವ ದೊಡ್ಡ ರೋಗ, ಬರುವ ದಿನಗಳಲ್ಲಿ ಈ ದೊಡ್ಡ ರೋಗ ಇರಲ್ಲ ಎಂದು ಪ್ರಕಾಶ್ ರೈ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು,’ ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ಆದ್ರೆ ಕೋಮುವಾದವನ್ನ ಬಿಂಬಿಸ್ತಿರೋ ಬಿಜೆಪಿ ಪಕ್ಷದ ವಿರೋಧಿ ನಾನು. ಬಿಜೆಪಿ ಹಾಗೂ ಆರ್‍ಎಸ್‍ಎಸ್‍ನ್ನು ಬೇರು ಸಹಿತ ಕಿತ್ತಾಕೋವರೆಗೂ ಹೋರಾಟ ಮಾಡುತ್ತೇನೆ. ಸಂವಿಧಾನ ಬದಲಾವಣೆ ಮಾಡ್ತೀನಿ ಅಂದ ಸಂಸದರಿಗೆ, ಏಕೆ ಬದಲಾವಣೆ ಮಾಡ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ನನಗೆ ಹಿಂದೂ ವಿರೋಧಿ ಅಂತಾ ಕರೆದ್ರು. ನನ್ನ ಪ್ರಕಾರ ಬಿಜೆಪಿ ಅನ್ನೋದು ಈ ದೇಶದಲ್ಲಿರುವ ದೊಡ್ಡ ರೋಗ, ಬರುವ ದಿನಗಳಲ್ಲಿ ಈ ದೊಡ್ಡ ರೋಗ ಇರಲ್ಲ’ ಎಂದು ಹೇಳಿದ್ದಾರೆ.


ಹಾಗೇ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಮಾತನಾಡಿ ಅವರು,’ ಅದು ಅವರ ಹಕ್ಕು. ಸರ್ಕಾರ ಜನರ ಮನವಿಗೆ ಸ್ಪಂದಿಸಿದೆ. ಅದ್ರಲ್ಲಿ ಏನ್ ತಪ್ಪಿದೆ’ ಎಂದು ರಾಜ್ಯ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments