Webdunia - Bharat's app for daily news and videos

Install App

ವಿಧಾನಸಭೆ ಕಲಾಪ : ನೂರಾರು ಶಾಸಕರು ಗೈರು

Webdunia
ಮಂಗಳವಾರ, 22 ಮಾರ್ಚ್ 2022 (10:31 IST)
ಬೆಂಗಳೂರು : ಕೋಟಿಗಟ್ಟಲೇ ಖರ್ಚು ಮಾಡಿ ವಿಧಾನಮಂಡಲ ಅಧಿವೇಶನ ನಡೆಸುತ್ತಾರೆ.
 
ಜನರ ತೆರಿಗೆ ದುಡ್ಡು ಮಾತ್ರ ಖಾಲಿ ಆಗುತ್ತೆ, ಅಧಿವೇಶನಕ್ಕೆ ಮಾತ್ರ ಶಾಸಕರು ಡೋಂಟ್ ಕೇರ್ ಅಂತಾರೆ. ವಿಧಾನಸಭೆ ಕಲಾಪಕ್ಕೆ ಶಾಸಕರ ನಿರಾಸಕ್ತಿ ಎದ್ದು ಕಾಣ್ತಿದೆ. ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ಶಾಸಕರ ಹಾಜರಾತಿಗೆ ಬರ ಬಂದಿದೆ.

ಇಂದು ಬೆಳಗ್ಗೆ ಕಲಾಪದಲ್ಲಿ 224 ಶಾಸಕರಲ್ಲಿ ಕಲಾಪಕ್ಕೆ ಹಾಜರಾದ ಶಾಸಕರ ಸಂಖ್ಯೆ 80 ಅನ್ನು ದಾಟಿಲ್ಲ. ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆ ನಡೆದ್ರೂ ಕೆಲವರಷ್ಟೇ ಭಾಗವಹಿಸ್ತಿದ್ದಾರೆ. ಇನ್ನು ಕೆಲ ಶಾಸಕರು ವಿಧಾನಸಭೆಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಲಾಪದಿಂದ ಮಾಯ ಆಗ್ತಿದ್ದಾರೆ.

ಇನ್ನೊಂದೆಡೆ ಭೋಜನ ನಂತರ ಕಲಾಪ ಆರಂಭಕ್ಕೆ ಮುಕ್ಕಾಲು ಗಂಟೆ ಬೆಲ್ ಹೊಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮೂಕ್ಕಾಲು ಗಂಟೆ ಬೆಲ್ ಹೊಡೆದ್ರೂ ಕೋರಂಗೆ ಅಗತ್ಯ ಇರುವಷ್ಟು ಶಾಸಕರು ಆಗಮಿಸಲಿರಲಿಲ್ಲ. ಮಧ್ಯಾಹ್ನದ ಬಳಿಕವೂ ಕಲಾಪದಲ್ಲೂ ಶಾಸಕರ ನಿರಾಸಕ್ತಿ ಇತ್ತು.

ಒಟ್ನಲ್ಲಿ ಶಾಸಕರಿಗೆ ಆಸಕ್ತಿ ಇಲ್ಲದ ಮೇಲೆ ವಿಧಾನಸಭೆ ಕಲಾಪ ಏಕೆ..? ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯನ್ನಾದ್ರೂ ಮಾಡಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬಾರದಾ..? ಕೋಟಿಗಟ್ಟಲೇ ಖರ್ಚು ಮಾಡಿ ಅಧಿವೇಶನ ನಡೆಸುವುದು ಯಾರಿಗಾಗಿ..? ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳೇ ಉತ್ತರಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Firing Case: ನ್ಯಾಯ ಸಿಗದಿದ್ದಲ್ಲಿ ಸುಮ್ಮನೇ ಕೂರವವರೇ ಅಲ್ಲ, ರಿಕ್ಕಿ ರೈ

ಗೌರವ ಡಾಕ್ಟರೇಟ್‌ ನಿರಾಕರಿಸಿದ ಸಚಿವ ಸತೀಶ್ ಜಾರಕಿಹೊಳಿ, ಕಾರಣ ಬಿಚ್ಚಿಟ್ಟಿದ್ದು ಹೀಗೇ

ಕಪ್ ಗೆದ್ದು ಅಭಿಮಾನಿಗಳ ಕಾಯುವಿಕೆ ಅಂತ್ಯ ಮಾಡಿ, RCBಗೆ ಶುಭ ಹಾರೈಸಿದ ಸಿದ್ದರಾಮಯ್ಯ

ವಾಕ್ ಸ್ವಾತಂತ್ರ್ಯವಿದೆ, ನೋವಿಸುವಷ್ಟರ ಮಟ್ಟಿಗಲ್ಲ: ಶರ್ಮಿಷ್ಟಾ ಪನೋಲಿಗೆ ಜಾಮೀನು ನೀಡಲು ಕೋರ್ಟ್‌ ನಿರಾಕರಣೆ

ಹಿಂದೂಗಳಿಗೆ ಹೀಗೇ ತೊಂದರೆ ಕೊಡುತ್ತಿದ್ದರೆ ಬಿಜೆಪಿ ಕೈಕಟ್ಟಿ ಕೂರಲ್ಲ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments