Webdunia - Bharat's app for daily news and videos

Install App

ವಿಧಾನಸಭೆ ಕಲಾಪ : ನೂರಾರು ಶಾಸಕರು ಗೈರು

Webdunia
ಮಂಗಳವಾರ, 22 ಮಾರ್ಚ್ 2022 (10:31 IST)
ಬೆಂಗಳೂರು : ಕೋಟಿಗಟ್ಟಲೇ ಖರ್ಚು ಮಾಡಿ ವಿಧಾನಮಂಡಲ ಅಧಿವೇಶನ ನಡೆಸುತ್ತಾರೆ.
 
ಜನರ ತೆರಿಗೆ ದುಡ್ಡು ಮಾತ್ರ ಖಾಲಿ ಆಗುತ್ತೆ, ಅಧಿವೇಶನಕ್ಕೆ ಮಾತ್ರ ಶಾಸಕರು ಡೋಂಟ್ ಕೇರ್ ಅಂತಾರೆ. ವಿಧಾನಸಭೆ ಕಲಾಪಕ್ಕೆ ಶಾಸಕರ ನಿರಾಸಕ್ತಿ ಎದ್ದು ಕಾಣ್ತಿದೆ. ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ಶಾಸಕರ ಹಾಜರಾತಿಗೆ ಬರ ಬಂದಿದೆ.

ಇಂದು ಬೆಳಗ್ಗೆ ಕಲಾಪದಲ್ಲಿ 224 ಶಾಸಕರಲ್ಲಿ ಕಲಾಪಕ್ಕೆ ಹಾಜರಾದ ಶಾಸಕರ ಸಂಖ್ಯೆ 80 ಅನ್ನು ದಾಟಿಲ್ಲ. ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆ ನಡೆದ್ರೂ ಕೆಲವರಷ್ಟೇ ಭಾಗವಹಿಸ್ತಿದ್ದಾರೆ. ಇನ್ನು ಕೆಲ ಶಾಸಕರು ವಿಧಾನಸಭೆಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಲಾಪದಿಂದ ಮಾಯ ಆಗ್ತಿದ್ದಾರೆ.

ಇನ್ನೊಂದೆಡೆ ಭೋಜನ ನಂತರ ಕಲಾಪ ಆರಂಭಕ್ಕೆ ಮುಕ್ಕಾಲು ಗಂಟೆ ಬೆಲ್ ಹೊಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮೂಕ್ಕಾಲು ಗಂಟೆ ಬೆಲ್ ಹೊಡೆದ್ರೂ ಕೋರಂಗೆ ಅಗತ್ಯ ಇರುವಷ್ಟು ಶಾಸಕರು ಆಗಮಿಸಲಿರಲಿಲ್ಲ. ಮಧ್ಯಾಹ್ನದ ಬಳಿಕವೂ ಕಲಾಪದಲ್ಲೂ ಶಾಸಕರ ನಿರಾಸಕ್ತಿ ಇತ್ತು.

ಒಟ್ನಲ್ಲಿ ಶಾಸಕರಿಗೆ ಆಸಕ್ತಿ ಇಲ್ಲದ ಮೇಲೆ ವಿಧಾನಸಭೆ ಕಲಾಪ ಏಕೆ..? ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯನ್ನಾದ್ರೂ ಮಾಡಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬಾರದಾ..? ಕೋಟಿಗಟ್ಟಲೇ ಖರ್ಚು ಮಾಡಿ ಅಧಿವೇಶನ ನಡೆಸುವುದು ಯಾರಿಗಾಗಿ..? ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳೇ ಉತ್ತರಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments