ಪಾಸಿಟಿವಿಟಿ ಭಾರಿ ಇಳಿಕೆ

Webdunia
ಶನಿವಾರ, 12 ಫೆಬ್ರವರಿ 2022 (09:16 IST)
ಬೆಂಗಳೂರು : ರಾಜ್ಯದ  ಕೋವಿಡ್-19ರ  ಪಾಸಿಟಿವಿಟಿ ದರದಲ್ಲಿ  ಭಾರಿ ಇಳಿಕೆ ದಾಖಲಾಗುತ್ತಿದೆ.
 
ಸತತ ಎರಡು ದಿನಗಳಿಂದ ಶೇ.5ರೊಳಗೆ ರಾಜ್ಯದ ಪಾಸಿಟಿವಿಟಿ ದರ ಬಂದಿದ್ದು ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವುದು ಖಚಿತವಾಗಿದೆ.

ಒಮಿಕ್ರೋನ್ ಪ್ರೇರಿತ ಮೂರನೇ ಅಲೆಯಲ್ಲಿ ಜನವರಿ 8 ರಂದು ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ.5 ದಾಟಿತ್ತು. ಅಲ್ಲಿಂದ ಬಳಿಕ ಏರುತ್ತ ಸಾಗಿದ್ದ ಪಾಸಿಟಿವಿಟಿ ದರ ಜನವರಿ 24ಕ್ಕೆ ಮೂರನೇ ಅಲೆಯ ಗರಿಷ್ಠ ಶೇ.32.95 ತಲುಪಿತ್ತು. ತದನಂತರ ಇಳಿಕೆ ಹಾದಿಯಲ್ಲಿ ಸಾಗಿದ ಪಾಸಿಟಿವಿಟಿ ದರ ಫೆ.9ಕ್ಕೆ ಮೊದಲ ಬಾರಿಗೆ ಶೇ.5 ರೊಳಗೆ ಬಂದಿದೆ.

ರಾಜ್ಯದಲ್ಲಿ ಸದ್ಯ ಐದಾರು ಜಿಲ್ಲೆಗಳಲ್ಲಿ ಮಾತ್ರ ಶೇ.5ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ದಾಖಲಾಗುತ್ತಿದೆ. ಫೆ. 10ರ ಮಾಹಿತಿಯಂತೆ ಶಿವಮೊಗ್ಗ (ಶೇ.8.41), ತುಮಕೂರು (ಶೇ. 7.62), ಕೊಡಗು (ಶೇ.7.14), ಬಳ್ಳಾರಿ (ಶೇ. 6.65), ಮೈಸೂರು (ಶೇ.5.95), ಚಾಮರಾಜನಗರ ಜಿಲ್ಲೆ (ಶೇ. 5.6)ಯಲ್ಲಿ ಮಾತ್ರ ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ವರದಿಯಾಗಿದೆ.

ಉಳಿದೆಲ್ಲ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಮಂಡ್ಯ (ಶೇ. 1.99), ರಾಯಚೂರು (ಶೇ. 1.86), ದಾವಣಗೆರೆ (ಶೇ. 1.8), ದಕ್ಷಿಣ ಕನ್ನಡ (ಶೇ. 1.75), ಕೊಪ್ಪಳ (ಶೇ. 1.68), ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ (ಶೇ. 1.56), ಪಾಸಿಟಿವಿಟಿ ದರ ಶೇ.2 ಕ್ಕಿಂತ ಕೆಳಕ್ಕಿಳಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಡ್ಯೂಟಿಯಲ್ಲಿದ್ದ ಪೊಲೀಸರ ಮೇಲೆ ದಾಳಿ, ಇಬ್ಬರು ಅರೆಸ್ಟ್‌

ನಿಂತಿದ್ದ ಲಾರಿಗೆ ಬೊಲೆರೋ ಡಿಕ್ಕಿ, ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು

ನಾಳೆ ಸಿದ್ದರಾಮಯ್ಯ ರಾಜೀನಾಮೆ ವದಂತಿ: ಸಿಎಂ ನಿವಾಸದ ಬಳಿ ಶಾಸಕರು, ಸಚಿರ ದೌಡು

ಬಕ್ರೀದ್‌ ಹಬ್ಬ: ಗೋಹತ್ಯೆ, ಅಕ್ರಮ ಮಾಂಸ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಎಬೋಲಾ ಪ್ರಕರಣದ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಸಚಿವ ದಿನೇಶ್ ಗುಂಡೂರಾವ್‌

ಮುಂದಿನ ಸುದ್ದಿ
Show comments