Webdunia - Bharat's app for daily news and videos

Install App

ಪ್ರವಾಹದ ಬಳಿಕ ಮತ್ತೊಂದು ಭೀತಿಯಲ್ಲಿ ನಿರಾಶ್ರಿತರು

Webdunia
ಸೋಮವಾರ, 20 ಆಗಸ್ಟ್ 2018 (09:16 IST)
ತಿರುವನಂತಪುರಂ: ಕೇರಳ ಮತ್ತು ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಸಾವಿರಾರು ಜನರ ಬದುಕು ದುಸ್ತರವಾಗಿದೆ. ಮನೆ ಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ್ದಾರೆ.

ಕೇರಳದಲ್ಲಿ ಸದ್ಯಕ್ಕೆ ವರುಣ ಕೊಂಚ ಬಿಡುವು ತೋರಿದರೂ ಮತ್ತೊಂದು ಭೀತಿ ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರನ್ನು ಕಾಡುತ್ತಿದೆ. ಅದು ಸಾಂಕ್ರಾಮಿಕ ರೋಗದ ಭೀತಿ.

ಸಾಮಾನ್ಯವಾಗಿ ಪ್ರವಾಹದ ನಂತರ ಜನರು ಸಂಕಷ್ಟಕ್ಕೀಡಾಗುವುದು ಇದೇ ಕಾರಣಕ್ಕೆ. ಇದೀಗ ಕೇರಳದ ನಿರಾಶ್ರಿತರ ಶಿಬಿರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಕೆಲವೆಡೆ ಚಿಕನ್ ಪಾಕ್ಸ್ ನಂತಹ ಹರಡುವ ಖಾಯಿಲೆ ಹೊಂದಿದವರು ಇದ್ದಾರೆ. ಇದರಿಂದಾಗಿ ಉಳಿದವರಿಗೂ ಇಂತಹ ಗಂಭೀರ ಖಾಯಿಲೆಗಳು ಹರಡುವ ಅಪಾಯ ಎದುರಾಗಿದೆ.

ಅದಲ್ಲದೆ, ನೀರು, ಗಾಳಿಯಿಂದ ಹರಡುವ ಇತರ ಸಾಂಕ್ರಾಮಿಕ ರೋಗಗಳ ಭೀತಿ ಕೇರಳದಲ್ಲಿ ಮನೆ ಮಾಡಿದೆ. ಈಗಾಗಲೇ ವೈದ್ಯರ ತಂಡ ಪ್ರವಾಹ ಪೀಡಿತರಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಮಳೆಯಿಂದಾಗಿ ಕೊಚ್ಚೆಯಂತಾಗಿರುವ ಪರಿಸರದಿಂದ ರೋಗದ ಭೀತಿ ಹೆಚ್ಚಾಗಿದೆ. ಪರಿಸ್ಥಿತಿ ಸುಧಾರಿಸಲು ಇನ್ನೆಷ್ಟು ದಿನಗಳು ಬೇಕೋ?!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ಈ ದುರಂತ ದಿಗ್ಭ್ರಮೆಗೊಳಿಸಿದೆ, ಮೋದಿ ಭಾವುಕ ಪೋಸ್ಟ್‌

Air India Plane Crash: ಕೊನೇ ಕರೆ ಮಾಡಿದ ಪೈಲಟ್ ಹೇಳಿದ್ದೇನು

Bengaluru Stampede: ವಿರಾಟ್ ಕೊಹ್ಲಿ ಸ್ನೇಹಿತನಿಗೆ ಬಿಗ್‌ ರಿಲೀಫ್‌

ವಾರದ ಹಿಂದೆಯಷ್ಟೇ ಮುಂಬಡ್ತಿ ಪಡೆದಿದ್ದ ಡಿ ರೂಪಾ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

Raja Raghuvanshi murder case: ಮೇಘಾಲಯ SIT ಸೋನಮ್ ಮುಂದಿಡುವ ಪ್ರಶ್ನೆಗಳು ಹೀಗಿದೆ

ಮುಂದಿನ ಸುದ್ದಿ
Show comments