Webdunia - Bharat's app for daily news and videos

Install App

ಲಸಿಕೆಯಿಂದ ಕಣ್ಣಿನ ದೃಷ್ಟಿ ಮರಳಿ ಪಡೆದ 70ರ ಅಜ್ಜಿ!

ಮಹಾರಾಷ್ಟ್ರದಲ್ಲಿ ಸಿನಿಮಾಗಳಲ್ಲಿ ನಡೆಯುವ ರೀತಿಯಲ್ಲಿ ಪವಾಡ ನಡೆದಿದೆ. ಕೋವಿಶೀಲ್ಡ್ ಲಸಿಕೆ ಪಡೆದ 70ರ ಅಜ್ಜಿಗೆ ಕಣ್ಣಿನ ದೃಷ್ಟಿ ಮತ್ತೆ ಬಂದಿದೆ

Webdunia
ಬುಧವಾರ, 7 ಜುಲೈ 2021 (19:18 IST)
ಮಹಾರಾಷ್ಟ್ರ : ಕೊರೋನಾ ವೈರಸ್ ಇಡೀ ಜಗತ್ತನ್ನೇ ವ್ಯಾಪಿಸಿ ಜನರ ನೆಮ್ಮದಿಯನ್ನು ಕಿತ್ತು ತಿಂದಿತ್ತು. ಯಾವಾಗ ಕೊರೋನಾ ತಡೆಗಟ್ಟುವ ಸಲುವಾಗಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಭಾರತಕ್ಕೆ ಬಂದಾಗ ಜನರು ಕೊಂಚ ಸಮಾಧಾನಪಟ್ಟರು. ಆದರೂ ಪ್ರಾರಂಭದಲ್ಲಿ ಕೆಲವರು ಕೋವಿಶೀಲ್ಡ್ ಲಸಿಕೆ ಪಡೆಯುವುದರಿಂದ ಪ್ರಾಣ ಕಳೆದುಕೊಂಡರು, ಆರೋಗ್ಯದಲ್ಲಿ ಏರುಪೇರಾಯಿತು ಎಂದೆಲ್ಲಾ ದೂರಿದ್ದರು. ಇದರಲ್ಲಿ ಲಾಭಕ್ಕಿಂತ ಅಡ್ಡ ಪರಿಣಾಮಗಳೇ ಹೆಚ್ಚು ಎಂದು ಹೇಳಿದ್ದರು.











 ಲಸಿಕೆ ಕುರಿತು ನಕಾರಾತ್ಮಕ ಅಂಶಗಳೇ ಹೆಚ್ಚಾಗಿ ಹರಿದಾಡಿದ್ದವು.
ಆದರೆ ಮಹಾರಾಷ್ಟ್ರದಲ್ಲಿ ಸಿನಿಮಾಗಳಲ್ಲಿ ನಡೆಯುವ ರೀತಿಯಲ್ಲಿ ಪವಾಡ ನಡೆದಿದೆ. ಕೋವಿಶೀಲ್ಡ್ ಲಸಿಕೆ ಪಡೆದ 70ರ ಅಜ್ಜಿಗೆ ಕಣ್ಣಿನ ದೃಷ್ಟಿ ಮತ್ತೆ ಬಂದಿದೆ. ಹೌದು ಈಕೆ ಕಣ್ಣಿನ ದೃಷ್ಟಿ ದೋಷದಿಂದ ಬಳಲುತ್ತಿದ್ದರು. ಲಸಿಕೆ ಪಡೆದ ನಂತರ ಅರ್ಧದಷ್ಟು ದೃಷ್ಟಿ ವಾಪಸಾಗಿದೆ ಎಂದು ಹೇಳಿಕೊಂಡಿದ್ದಾರೆ.
ಮಥುರಾಬಾಯಿ ಬಿದ್ವೆ ದೃಷ್ಟಿ ವಾಪಸ್ಸು ಪಡೆದ ಅಜ್ಜಿ. ಇವರು ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಸುಮಾರು 9 ವರ್ಷದವರಿದ್ದಾಗಲೇ ಕಣ್ಣಿನ ಪೊರೆ ಬಂದ ಕಾರಣ ಅವರು ತಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು. ಇವರು ಜೂನ್ 26ರಂದು ಕೋವಿಶೀಲ್ಡ್ ಲಸಿಕೆ ಪಡೆದರು. ಅದರ ಮರುದಿನವೇ ಸುಮಾರು 30 ರಿಂದ 40 ಪ್ರತಿಶತದಷ್ಟು ದೃಷ್ಟಿ ಪಡೆದಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
ಬಿದ್ವೆ ಅವರು ಮೂಲತಃ ಜಲ್ನಾ ಜಿಲ್ಲೆಯ ಪರ್ತೂರಿನವರು. ಇವರು ತಮ್ಮ ಸಂಬಂಧಿಕರ ಜೊತೆ ರಿಸೋದ್ ತೆಸಿಲ್ನಲ್ಲಿ ವಾಸವಾಗಿದ್ದಾರೆ. ಕೋವಿಶೀಲ್ಡ್ ಲಸಿಕೆ ಪಡೆದ ನಂತರ ಕಣ್ಣಿನ ದೃಷ್ಟಿ ಬಂದಿರುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಇದಕ್ಕೂ ಮೊದಲು, ಜೂನ್ನಲ್ಲಿ ಮಹಾರಾಷ್ಟ್ರದ 71 ವರ್ಷದ ಅರವಿಂದ್ ಸೋನಾರ್ ಎಂಬ ವೃದ್ಧರೊಬ್ಬರು ವಿಲಕ್ಷಣವಾದ ಹೇಳಿಕೆಯನ್ನು ನೀಡಿದ್ದರು. ಕೋವಿಶೀಲ್ಡ್ ಎರಡೂ ಡೋಸೇಜ್ ತೆಗೆದುಕೊಂಡ ನಂತರ ದೇಹದಲ್ಲಿ ಕಾಂತೀಯ ಶಕ್ತಿ ಉದ್ಭವವಾಗಿದೆ ಎಂದು ಹೇಳಿದ್ದರು. ಈ ಸಂಬಂಧದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇನ್ನು ಸೂರತ್ನಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಪರ್ಬತ್ ಪಟಿಯಾ ಪ್ರದೇಶದ ಸುಭಾಶ್ನಗರ ಸೊಸೈಟಿಯಲ್ಲಿ ವಾಸಿಸುತ್ತಿರುವ ಇಬ್ಬರು ಕುಟುಂಬ ಸದಸ್ಯರಲ್ಲಿ ಲಸಿಕೆ ಪಡೆದ ನಂತರ ಕಾಂತೀಯ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿತ್ತು. ಪೂನಮ್ ಜಗ್ತಾಪ್, ಅವರ ತಾಯಿ ಮತ್ತು ಮಗ ಕಾಂತೀಯ ಗುಣಲಕ್ಷಣಗಳನ್ನು ತೋರಿಸಿದ್ದಾರೆಂದು ವರದಿಯಾಗಿದೆ, ಇದನ್ನು ಆರಂಭದಲ್ಲಿ ಯಾರೂ ನಂಬಲಿಲ್ಲ. ನಂತರ ಅವರಲ್ಲಿ ಕಂಡು ಬಂದ ಕಾಂತೀಯ ಸ್ಥಿತಿ ಕಂಡು ಗೊಂದಲಕ್ಕೊಳಗಾಗಿದ್ದರು. ಮಗುವನ್ನು ಹೊರತುಪಡಿಸಿ ಜಗ್ತಾಪ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಲಸಿಕೆ ನೀಡಲಾಗಿದೆ.
ಮೆಸೆಂಜರ್ ಆರ್ಎನ್ಎ ದೇಹದಾದ್ಯಂತ ಚಲಿಸುವಂತೆ ಮಾಡಲು ಲಸಿಕೆಯಲ್ಲಿ ಮ್ಯಾಗ್ನೆಟಿಸಮ್ ಅನ್ನು ಸೇರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಫ್ಯಾಕ್ಟ್-ಚೆಕಿಂಗ್ ಆರ್ಮ್, ಪಿಐಬಿ ಫ್ಯಾಕ್ಟ್ ಚೆಕ್ ಇದು ಆಧಾರರಹಿತ ಎಂದು ಹೇಳಿದೆ. ಲಸಿಕೆ ಜನರನ್ನು ಕಾಂತೀಯವಾಗಿಸಲು ಸಾಧ್ಯವಿಲ್ಲ ಮತ್ತು ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸರಲ್ಲ ನೀವು ರಾಜೀನಾಮೆ ಕೊಡ್ಬೇಕು ಎಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹೀಗೆ ಹೇಳೋದಾ

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Chenab Railway bridge: ಪ್ರಧಾನಿ ಮೋದಿ ಉದ್ಘಾಟಿಸಿದ ಚಿನಾಬ್ ಸೇತುವೆಯ ವಿಹಂಗಮ ವಿಡಿಯೋ

Gold price today: ಅಬ್ಬಾ.. ಚಿನ್ನದ ದರ ಕೇಳಿದ್ರೇ ಶಾಕ್

Seemanth Kumar: ಬೆಂಗಳೂರು ಹೊಸ ಕಮಿಷನರ್ ಸೀಮಂತ ಕುಮಾರ್ ಎಲ್ಲಿಯವರು, ಅವರ ಹಿನ್ನಲೆಯೇನು

ಮುಂದಿನ ಸುದ್ದಿ
Show comments