ಇವತ್ತಿಗೂ ಸರಕಾರಿ ಬಸ್ ಬಾರದ ಊರು ಇದೆ ಎಂದ್ರೆ ನಂಬುತ್ತೀರಾ?

Webdunia
ಶುಕ್ರವಾರ, 18 ಮೇ 2018 (15:49 IST)
ಊರ ಮುಂದೆ ಕೂತಿರುವ ಜನರು, ಬಸ್ ವ್ಯವಸ್ಥೆ ಇಲ್ಲದೆ ನಡೆದುಕೊಂಡು ಬರುತ್ತಿರುವ ಶಾಲಾ ಮಕ್ಕಳು, ಮಹಿಳೆಯರು. ಇಂತದೊಂದು ಸನ್ನಿವೇಶ ಕಂಡು ಬಂದದ್ದು ದಾವಣಗೆರೆ ತಾಲೂಕಿನ ವಿಟ್ಟಲಾಪುರ ಗ್ರಾಮದಲ್ಲಿ, ಕಳೆದ 20-25 ವರ್ಷದಿಂದ ಈ ಊರಿಗೆ ಬಸ್ಸೆ ಬಂದಿಲ್ಲ ಅಂದ್ರೆ ನಂಬಲೇಬೇಕು, ಇಲ್ಲಿ ನಿತ್ಯ 4 ಕಿ. ಮೀ ದೂರ ನಡೆದು ಮಹಿಳೆಯರು ಮಕ್ಕಳು ಬಸ್ಸತ್ತಬೇಕು,  ಒಂದು ವೇಳೆ ಬೇರೆ ಊರಿನಿಂದ ಲೇಟಾಗಿ ರಾತ್ರಿ ಬಂದ್ರೆ ಅವರನ್ನ ಕರೆದುಕೊಂಡು ಬರಲು, ಇಬ್ಬರು ಮೂವರು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಊರಿಗೆ ಬಸ್ ಬಾರದ ಹಿನ್ನೆಲೆಯಲ್ಲಿ ಹೆಣ್ಣು ಕೊಡಲು ಬೇರೆ ಊರಿನವರು ಹಿಂದೆ ಮುಂದೆ ನೋಡುತ್ತಿದ್ದಾರೆ, ಕೂಡಲೆ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಿಕೊಡಿ ಎಂಬುದು ಅಲ್ಲಿನ ಯುವಕರ ಅಳಲು.
 
 ಇನ್ನು ಇಲ್ಲಿ ಮಹಿಳೆಯರು ಮನೆಯಿಂದ ಬೇರೆ ಊರಿಗೆ ಹೋಗೋದನ್ನ ಮರೆತಿದ್ದಾರೆ. ಕೊನೆ ಪಕ್ಷ ದಿನಕ್ಕೆ ಒಂದು ಬಾರಿಯಾದ್ರು ಬಸ್ಸ್ ಬಂದಿದ್ದರೆ ನಾವು ಹೇಗಾದರು ಟೈಮ್ ಅರ್ಜಸ್ಟ್ ಮಾಡಿಕೊಂಡು ಬೇರೆ ಊರಿಗಾದ್ರು ಹೋಗುತ್ತಿದ್ವಿ, ಆದ್ರೆ ಈಗ ನಮ್ಮ ಸಂಬಂಧಿಕರ ಊರನ್ನ ಮರೆತು ಬಿಟ್ಟಿದ್ದೇವೆ. ಅಲ್ಲದೆ ಮಹಿಳೆಯರಿಗೆ ಅಥವಾ ವೃದ್ಧರಿಗೆ ಏನಾದ್ರು ಸಮಸ್ಯೆಯಾದ್ರೆ ಎತ್ತಿನ ಗಾಡಿ ಹೂಡಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಹಾಗೂ ಚುನಾವಣೆಯಲ್ಲಿ ಭರವಸೆ ನೀಡಿದಂತ ರಾಜಕಾರಣಿಗಳು ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮಹಿಳೆಯರು ಅವಲೊತ್ತುಕೊಂಡಿದ್ದಾರೆ.
 
ಒಟ್ಟಾರೆಯಾಗಿ ಈ ಹಳ್ಳಿಗೆ ಕಳೆದ 25 ವರ್ಷದಿಂದ ನಟರಾಜ ಸರ್ವಿಸ್ ಗತಿಯಾಗಿದ್ದು, ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ.  ಇನ್ನಾದರು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇತ್ತ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎನ್ ಡಿಎ ಸಂಸದರು ಏನು ಇಂಡಿಯಾ ಗೇಟ್ ಕಾಯಕ್ಕೆ ಇದ್ದಾರಾ: ನಾಲಿಗೆ ಹರಿಬಿಟ್ಟ ಪ್ರದೀಪ್ ಈಶ್ವರ್

ಪ್ರಿಯಾಂಕ್ ಖರ್ಗೆಯವರೇ ಸಿಎಂಗೆ ಹೇಳಿ ಇದೊಂದು ಕೆಲಸ ಮಾಡಿಕೊಟ್ಬಿಡಿ: ಆರ್ ಅಶೋಕ್

ಹೈಕಮಾಂಡ್ ಗೆ ಕಪ್ಪ ಕೊಟ್ಟ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪೋಟಕ ಟ್ವೀಟ್

ಸಾಮಾಜಿಕ ಜಾಲತಾಣದಲ್ಲಿ ರೋಷಾವೇಶ ಬೆನ್ನಲ್ಲೇ ಸಿಎಂ, ಡಿಸಿಎಂ ಮನೆಗೆ ದೌಡಾಯಿಸಿದ ಕಿರಣ್‌ ಮಜುಂದಾರ್‌

ಸಂವಿಧಾನ ವಿರೋಧಿ ಅನೈತಿಕ ಪೊಲೀಸ್ ಗಿರಿಗೆ ಈಗ ಕಡಿವಾಣ ಬಿದ್ದಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments