ಬೇಕಾದ ಖಾತೆ ಸಿಗದೇ ಬೇಸರಗೊಂಡಿದ್ದಾರೆಯೇ ಡಿಕೆಶಿ?

Webdunia
ಶನಿವಾರ, 2 ಜೂನ್ 2018 (09:58 IST)
ಬೆಂಗಳೂರು: ಸಮ್ಮಿಶ್ರ ಸರ್ಕಾರ  ಅಸ್ಥಿತ್ವಕ್ಕೆ ಬರಲು ಪ್ರಧಾನ ಪಾತ್ರ ವಹಿಸಿದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಒಂದೊಮ್ಮೆ ಉಪಮುಖ್ಯಂತ್ರಿ ಸ್ಥಾನಕ್ಕೇ ಪಟ್ಟು ಹಿಡಿದಿದ್ದರು. ಆದರೆ ಇದೀಗ ಬೇಡಿದ ಖಾತೆ ಸಿಗದೇ ನಿರಾಶರಾಗಿದ್ದಾರೆಯೇ?

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಾರ್ಯ ಬಹುತೇಕ ಅಂತಿಮಗೊಂಡಿದೆ. ಆದರೆ ಡಿಕೆ ಶಿವಕುಮಾರ ಉಪಮುಖ್ಯಮಂತ್ರಿ ಸ್ಥಾನ ಕೊಡದಿದ್ದರೆ ಹಣಕಾಸು ಅಥವಾ ಇಂಧನ ಖಾತೆಗೆ ಬೇಡಿಕೆ ಇಟ್ಟಿದ್ದರು. ಆದರೆ ಇವೆರಡೂ ಈಗ ಜೆಡಿಎಸ್ ಪಾಲಾಗಿವೆ.

ಹೀಗಾಗಿ ಡಿಕೆಶಿ ಅಸಮಾಧಾನಗೊಂಡಿದ್ದಾರೆಯೇ? ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಎಚ್ ಡಿ ರೇವಣ್ಣ ಜತೆಗೆ ಪೈಪೋಟಿ ಇದೆಯೇ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರದಲ್ಲಿ ಈ ಅನುಮಾನ ಎದ್ದಿದೆ. ‘ರೇವಣ್ಣ ದೊಡ್ಡ ಮನೆ ಮಕ್ಕಳು. ಅವರ ಜತೆ ನಾನು ಫೈಟ್ ಮಾಡಕ್ಕಾಗುತ್ತಾ? ನಾನು ಸಾಮಾನ್ಯ ರೈತರ ಮಗ’ ಎಂದು ಡಿಕೆಶಿ ಪರೋಕ್ಷವಾಗಿ ತಮ್ಮೊಳಗಿರುವ ಅಸಮಾಧಾನ ಹೊರ ಸೂಸಿದ್ದಾರೆ. ಖಾತೆ ಹಂಚಿಕೆ ಆದ ಮೇಲೆ ಇನ್ನೆಷ್ಟು ಮಂದಿ ನಾಯಕರ ಅಸಮಾಧಾನ ಹೊರಬರುತ್ತೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ಟಾರ್ಚ್ ನಲ್ಲಿ ಬಸ್ ಓಡಿಸಿದ ಪ್ರಕರಣ: ಚಾಲಕ ಸೇರಿ ಮೂವರು ಸಸ್ಪೆಂಡ್

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ಪದೇಪದೇ ದೌರ್ಜನ್ಯ: ವಿಜಯೇಂದ್ರ

ಸಹೋದ್ಯೋಗಿ ಜೊತೆ ಚಕ್ಕಂದವಾಡಿ ಪತ್ನಿ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ಪೊಲೀಸಪ್ಪ: ಮುಂದೇನಾಯ್ತು ನೋಡಿ Video

ಪ್ರಹ್ಲಾದ್ ಜೋಶಿ ದಾಳಕ್ಕೆ ಕುಮಾರಸ್ವಾಮಿ ಬಲಿಯಾಗುತ್ತಿರುವುದೇಕೆ: ಬಿ.ಕೆ. ಹರಿಪ್ರಸಾದ್

ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ, ಜೆಡಿಎಸ್ ದೂರು, ಎಸ್ಐಆರ್ ಬುಡಮೇಲು ಮಾಡಲು ಷಡ್ಯಂತ್ರ: ಪ್ರಲ್ಹಾದ ಜೋಶಿ

ಮುಂದಿನ ಸುದ್ದಿ
Show comments