ಕಚ್ಚಾ ತೈಲ ಬೆಲೆ ಏರಿಕೆಯ ಆತಂಕ : ನಾಗೇಶ್ವರನ್

Webdunia
ಶುಕ್ರವಾರ, 25 ಫೆಬ್ರವರಿ 2022 (07:28 IST)
ಭಾರತದ ಆರ್ಥಿಕತೆಯು ಈಗ ಚೇತರಿಕೆಗೆ ಸಿದ್ಧವಾಗಿದ್ದು, ಹೆಚ್ಚಿನ ಕಚ್ಚಾ ತೈಲ ಬೆಲೆಯು ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.
 
ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರವಾಗಿದೆ, ಬಂಡವಾಳ ಲಭ್ಯವಿದೆ ಮತ್ತು ಕ್ರೆಡಿಟ್ ಆಫ್ಟೇಕ್ ಚೇತರಿಕೆಗೆ ಸಿದ್ಧವಾಗಿದೆ ಎಂದು ಭಾರತ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ವೆಬಿನಾರ್ನಲ್ಲಿ ಅವರು ಹೇಳಿದರು.

“ಕೊರೊನಾ ರೋಗದಿಂದಾಗಿ ಅನಿಶ್ಚಿತ ಬೆಳವಣಿಗೆ ಮತ್ತು ಹೆಚ್ಚಿನ ಹಣದುಬ್ಬರದ ವಿದ್ಯಮಾನಕ್ಕೆ ನಾವು ಹೊರತಾಗಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳು ಸಹ ಅದೇ ಸಮಸ್ಯೆಯನ್ನು ಎದುರಿಸುತ್ತಿವೆ,” ಎಂದು ಅವರು ಹೇಳಿದ್ದಾರೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 75 ಯುಎಸ್ಡಿ ಎಂದು ಮನಸ್ಸಿನಲ್ಲಿ ಇಟ್ಟುಕೊಂಡು 2022-23ರ ಬಜೆಟ್ ಆಗಿದೆ.

ಆದರೆ ರಷ್ಯಾ ಮತ್ತು ಉಕ್ರೇನ್ ಮಧ್ಯದ ಸಂಘರ್ಷದಿಂದಾಗಿ ಟೆಕ್ಸಾಸ್ ಕಚ್ಚಾ ತೈಲದ ಬೆಲೆ ಈಗ ಪ್ರತಿ ಬ್ಯಾರೆಲ್ಗೆ 96 ಯುಎಸ್ಡಿ ಆಗಿದೆ. “ಭಾರತದ ಆರ್ಥಿಕತೆಯ ಮೇಲೆ ಇದರ ಪ್ರಭಾವವು ಈ ಹೆಚ್ಚಿನ ಬೆಲೆ ಎಷ್ಟು ಕಾಲ ಉಳಿಯುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ,” ಎಂದು ನಾಗೇಶ್ವರನ್ ಹೇಳಿದ್ದಾರೆ.

ನಾಗೇಶ್ವರನ್ ಅವರ ಪ್ರಕಾರ, ಹಣದುಬ್ಬರ ಮತ್ತು ಖರೀದಿಸುವ ಸಾಮರ್ಥ್ಯವು ಪ್ರಪಂಚದಾದ್ಯಂತದ ಸಮಸ್ಯೆಯಾಗಿದೆ. ಸಾಗಣೆ ವೆಚ್ಚಗಳು, ಹೆಚ್ಚಿನ ಕಂಟೇನರ್ ವೆಚ್ಚಗಳು ಮತ್ತು ಹೆಚ್ಚಿನ ತೈಲ ಬೆಲೆಗಳು ಇದಕ್ಕೆ ಕಾರಣ ಎನ್ನಲಾಗಿದೆ.

ಭಾರತದಲ್ಲಿ ಹಣದುಬ್ಬರ ದರಗಳು ಸದ್ಯಕ್ಕೆ ಶೇಕಡಾ 5.2ರ ಆಸುಪಾಸಿನಲ್ಲಿವೆ. “ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಇದು ಆರ್ಬಿಐ ನಿಗದಿ ಮಾಡಿರುವ ಶೇಕಡಾ ನಾಲ್ಕರಿಂದ ಆರರೊಳಗೆ ಉಳಿಯಬೇಕು ಎಂಬುದಾಗಿ ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಮಾರುಕಟ್ಟೆ ತಿದ್ದುಪಡಿ ಆರಂಭಿಸಿದೆ ಎಂದು ಸಿಇಎ ಹೇಳಿದ್ದಾರೆ.

“ಕೆಲವು ಕೈಗಾರಿಕೆಗಳಲ್ಲಿನ ಚಟುವಟಿಕೆ ಮಟ್ಟಗಳು ಕೊರೊನಾ-ಪೂರ್ವ ಮಟ್ಟವನ್ನು ದಾಟಿದೆ. ಆದರೆ ಸೇವಾ ವಲಯವು ಇನ್ನೂ ಚೇತರಿಸಿಕೊಂಡಿಲ್ಲ”. ಖಾಸಗಿ ವಲಯದ ಹೂಡಿಕೆಯ ಸನ್ನಿವೇಶಕ್ಕೆ ಸಂಬಂಧಿಸಿದಂತೆ, ಕೊರೊನಾದ ಕಾರಣದಿಂದಾಗಿ ಅದು ಇನ್ನೂ ಹೆಚ್ಚಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments