Webdunia - Bharat's app for daily news and videos

Install App

ಗ್ರಾಹಕರ ಕೈಗೆಟಕದ ತರಕಾರಿ ಬೆಳೆ! ಬೆಲೆ ಎಷ್ಟಿದೆ ಗೊತ್ತ?

Webdunia
ಶನಿವಾರ, 20 ನವೆಂಬರ್ 2021 (08:06 IST)
ಬೆಂಗಳೂರು : ಇದುವರೆಗೆ ಟೊಮೇಟೊ, ಈರುಳ್ಳಿ, ಬೀನ್ಸ್ ದರ ಮಾತ್ರ ನೂರರ ಗಡಿ ದಾಟುತ್ತಿದ್ದವು.
ಇದೇ ಮೊದಲ ಬಾರಿಗೆ ಬೆಂಡೆಕಾಯಿ, ಹೀರೇಕಾಯಿ, ಬದನೆಕಾಯಿ, ತೊಗರಿಕಾಯಿಯಂತಹ ಹಲವು ತರಕಾರಿಗಳು ಸೆಂಚುರಿ ಬಾರಿಸಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ದೊಡ್ಡ ಪ್ರಮಾಣದಲ್ಲಿ ತಟ್ಟಿದೆ. ಕ್ಯಾಪ್ಸಿಕಂ, ನುಗ್ಗೆಕಾಯಿ ಮತ್ತಿತರ ಕೆಲವು ತರಕಾರಿಗಳು ಗ್ರಾಹಕರ ಕೈಗೆಟುಕದಷ್ಟು ದುಬಾರಿಯಾಗಿವೆ.
ಇದುವರೆಗೆ ಈರುಳ್ಳಿ ಬೆಲೆ ಏರಿಕೆಯಿಂದ ಮಾತ್ರ ಫಜೀತಿಗೀಡಾಗುತ್ತಿದ್ದ ಗ್ರಾಹಕರು, ಈಗ ಎಲ್ಲಾ ರೀತಿಯ ತರಕಾರಿ, ಸೊಪ್ಪುಗಳ ದರ ಏರಿಕೆಯ ಬಿಸಿ ಅನುಭವಿಸುವಂತಾಗಿದೆ. ಇನ್ನೂ ಒಂದು ತಿಂಗಳು ಇದೇ ರೀತಿ ಬೆಲೆ ಏರಿಕೆ ಮುಂದುವರಿಯುವ ಮುನ್ಸೂಚನೆಯೂ ವ್ಯಕ್ತವಾಗಿದೆ.
ಮುಂಗಾರಿನಿಂದಲೂ ರಾಜ್ಯದಲ್ಲಿ ಭರ್ಜರಿ ಮಳೆ ಸುರಿದಿದೆ. ಹಾಗೆಯೇ, ಹಿಂಗಾರು ಆರಂಭಗೊಂಡ ಬಳಿಕ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ನಿರಂತರ ಮಳೆ ಸುರಿಯುತ್ತಿದೆ. ಹೊಲ, ತೋಟಗಳಲ್ಲಿ ನೀರು ತುಂಬಿಕೊಂಡು ಬೆಳೆ ನಾಶವಾಗಿದೆ. ಕಟಾವಿಗೆ ಬಂದಿರುವ ಫಸಲು ರೈತರ ಕೈಸೇರದಂತಾಗಿದೆ.
ಈಗಿನ ದರ -ಕಳೆದ ತಿಂಗಳ ದರ
•ಬಿಳಿ ಬದನೆಕಾಯಿ- 92 ರೂ. -51 ರೂ.
•ಟೊಮೇಟೊ 93 ರೂ.-38-40 ರೂ.
•ನುಗ್ಗೆಕಾಯಿ ದರ 234 ರೂ.- 140 ರೂ.
•ದಪ್ಪ ಮೆಣಸಿನಕಾಯಿ 130 ರೂ.-60 ರೂ.
•ಊಟಿ ಕ್ಯಾರಟ್ 104 ರೂ. -80 ರೂ.
•ನಾಟಿ ಕ್ಯಾರಟ್ 100 ರೂ. -80 ರೂ.
•ಹೂಕೋಸು ಒಂದಕ್ಕೆ 54 ರೂ. -45 ರೂ.
•ಬೆಂಡೆಕಾಯಿ 76 ರೂ. -52 ರೂ.
•ಮೂಲಂಗಿ 62 ರೂ.- 53 ರೂ.
•ಹೀರೇಕಾಯಿ 90 ರೂ.- 56 ರೂ.
•ಮೆಂತ್ಯ ಸೊಪ್ಪು 135 ರೂ. -80 ರೂ.
•ಪಾಲಾಕ್ ಸೊಪ್ಪು 100 ರೂ.-45-50 ರೂ.
•ದಂಟಿನ ಸೊಪ್ಪು 72 ರೂ. -38 ರೂ.
•ಸಬ್ಬಕ್ಕಿ 80 ರೂ. -53 ರೂ.
•ಹರಿವೆ ಸೊಪ್ಪು 72 ರೂ.-42 ರೂ.
•ಕೊತ್ತಂಬರಿ ನಾಟಿ 88 ರೂ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments