ಮಲೇರಿಯಾ ಲಸಿಕೆಗೆ ಸಮ್ಮತಿ

Webdunia
ಶನಿವಾರ, 9 ಅಕ್ಟೋಬರ್ 2021 (19:39 IST)
ಸರಿಸುಮಾರು ಶತಮಾನದಿಂದ ಇಡೀ ವಿಶ್ವವನ್ನು ಅದರಲ್ಲೂ ಪ್ರಮುಖವಾಗಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳನ್ನು ನಿರಂತರವಾಗಿ ಕಾಡುತ್ತಾ ಬಂದಿರುವ ಮಲೇರಿಯಾ ಕಾಯಿಲೆಗೆ ಲಸಿಕೆಯೊಂದನ್ನು ಸಂಶೋಧಿಸುವ ಪ್ರಕ್ರಿಯೆಯಲ್ಲಿ ವೈದ್ಯಕೀಯ ಕ್ಷೇತ್ರ ಕೊನೆಗೂ ಯಶಸ್ಸು ಕಂಡಿದೆ.

ಸಂಶೋಧಕರ ಪಾಲಿಗೆ ಕಠಿನ ಸವಾಲಾಗಿ ಪರಿಣಮಿಸಿದ್ದ ಮಲೇರಿಯಾ ಕಾಯಿಲೆಗೆ ಲಸಿಕೆಯೊಂದನ್ನು ಸಂಶೋಧಿಸಿ ಲಕ್ಷಾಂತರ ಮಕ್ಕಳ ಪ್ರಾಣ ಉಳಿಸುವಲ್ಲಿ ಸಫಲರಾಗಿದ್ದಾರೆ.
ಎಲ್ಲ ವಯೋಮಾನದವರನ್ನು ಮಲೇರಿಯಾ ಕಾಯಿಲೆ ಕಾಡುತ್ತದೆಯಾದರೂ ಮಕ್ಕಳ ಪಾಲಿಗೆ ಇದು ಯಮದೂತನೇ ಸರಿ. ಬಡತನ ವ್ಯಾಪಕವಾಗಿರುವ ದೇಶಗಳಲ್ಲಿ ಪ್ರತೀ ವರ್ಷ ಈ ಕಾಯಿಲೆಯಂದ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದು ಈ ಪೈಕಿ ಮಕ್ಕಳ ಸಂಖ್ಯೆಯೇ ಅಧಿಕ. ಅದರಲ್ಲೂ ಆಫ್ರಿಕನ್ ದೇಶಗಳಲ್ಲಿ ಮಲೇರಿಯಾ ಬಾಧೆ ಅಧಿಕವಾಗಿದ್ದು ನಿರಂತರವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಾಣಹಾನಿ ಸಂಭವಿಸುತ್ತಿರುತ್ತದೆ. ಮಲೇರಿಯಾಕ್ಕೆ ತುತ್ತಾಗುವ ಮಕ್ಕಳ ಪ್ರಾಣ ರಕ್ಷಣೆಗಾಗಿ ಕಳೆದ ಮೂರು ದಶಕಗಳಿಂದ ವಿವಿಧ ದೇಶಗಳ ವೈದ್ಯಕೀಯ ತಜ್ಞರು ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಇದರ ಫಲವಾಗಿ ಕೆಲವೊಂದು ಲಸಿಕೆಗಳನ್ನು ಸಂಶೋಧಿಸಲಾಗಿತ್ತಾದರೂ ಅದರ ಪರಿಣಾಮಕತ್ವದ ಬಗೆಗೆ ಅನುಮಾನಗಳು ಮೂಡಿದ್ದರಿಂದಾಗಿ ಈ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಲಭಿಸಿರಲಿಲ್ಲ.
ಬ್ರಿಟನ್ನ ಫಾರ್ಮಾಸ್ಯುಟಿಕಲ್ ಕಂಪೆನಿಯಾದ ಗ್ಲ್ಯಾಕ್ಸೋಸ್ಮಿತ್ ಕ್ಲೈನ್ 1987ರಲ್ಲಿ ಅಭಿವೃದ್ಧಿಪಡಿಸಿದ ಮಾಸ್ಕ್ವಿರಿಕ್ಸ್ ಎಂಬ ಲಸಿಕೆಗೆ 31 ವರ್ಷಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕ ಬಳಕೆಗೆ ಅನುಮತಿಯನ್ನು ನೀಡಿದೆ. ಮಲೇರಿಯಾ ರೋಗದ ಪ್ರಕರಣಗಳು ಅಧಿಕವಾಗಿರುವ ಆಫ್ರಿಕಾದ ದೇಶಗಳಲ್ಲಿ ಈ ಲಸಿಕೆಯನ್ನು ಮಕ್ಕಳಿಗೆ ಆದ್ಯತೆಯ ಮೇಲೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಚಿಂತನೆ ನಡೆಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲೆಂದರಲ್ಲಿ ಕಸ ಎಸೆದರೆ ಎಚ್ಚರ: ಇನ್ನು ಮುಂದೆ ರಸ್ತೆರಸ್ತೆಯಲ್ಲೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಗ್ರಾಹಕರಿಗೆ ಗುಡ್‌ನ್ಯೂಸ್‌: ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದಲೇ ಕೊಂಚ ಅಗ್ಗ

ಆರ್ ಎಸ್ಎಸ್ ಪಂಥಸಂಚಲನಕ್ಕೆ ಅನುಮತಿ ಬೇಕು, ಎಂಇಎಸ್ ಪುಂಡರಿಗೆ ಇದು ಅಪ್ಲೈ ಆಗಲ್ವಾ

ಮತ್ತೊಂದು ಕಾಲ್ತುಳಿತ: ಇತಿಹಾಸ ಪ್ರಸಿದ್ಧ ಕ್ಷೇತ್ರದಲ್ಲಿ ದೇವರದರ್ಶನದ ನೂಕುನುಗ್ಗಲಿನಲ್ಲಿ 9 ಮಂದಿ ಸಾವು

ಮೋದಿ ವಿರುದ್ಧ ಸದಾ ಕೆಂಡಕಾರುತ್ತಿದ್ದ ಸಂಜಯ್ ರಾವತ್ ಗೆ ಏನಾಗಿದೆ ನೋಡಿ: ಗಂಭೀರ ಸಮಸ್ಯೆಯಲ್ಲಿ ನಾಯಕ

ಮುಂದಿನ ಸುದ್ದಿ
Show comments