ಬೆಂಗಳೂರು : ಸಿಂಗ್ರೇ ಗೌಡ ಎನ್ನುವವರು ಅರ್ಜಿ ಸಲ್ಲಿಸಿದ್ದು ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಮಕ್ಕಳು ಆನ್ಲೈನ್ ತರಗತಿಗಳ ಮೂಲಕ ಪಠ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಕಷ್ಟಪಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕೊರೋನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತೊಂದರೆ ಮಾಡಲಿದೆ ಎಂದು ಅನೇಕ ಪರಿಣಿತರು ಮುನ್ನೆಚ್ಚರಿಕೆ ಕೊಟ್ಟರು ಪರೀಕ್ಷೆ ನಡೆಸಲು ಹೊರಟಿರುವ ಸರ್ಕಾರದ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಡೆಯ ವಿರುದ್ದ ಜನರು ಆಕ್ರೋಶ ಗೊಂಡಿದ್ದಾರೆ. ಮೊದಲ ಅಲೆಯ ಸಮಯದಲ್ಲೆ ಪರೀಕ್ಷೆ ನಡೆಸಿ ಯಾವುದೇ ಅವಘಡ ಆಗದಂತೆ ಗೆದ್ದ ಸರ್ಕಾರ ಆತ್ಮವಿಶ್ವಾಸದಲ್ಲಿ ಇದ್ದು ಈ ಬಾರಿಯೂ ಮಕ್ಕಳಿಗೆ ತೊಂದರೆ ಅಗದಂತೆ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.