Select Your Language

Notifications

webdunia
webdunia
webdunia
webdunia

ಬೈಲಹೊಂಗಲ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಜಗದೀಶ್ ಮೆಟಗುಡ್ಡ ನಾಮಪತ್ರ ಸಲ್ಲಿಕೆ

ಬೈಲಹೊಂಗಲ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಜಗದೀಶ್ ಮೆಟಗುಡ್ಡ ನಾಮಪತ್ರ ಸಲ್ಲಿಕೆ
ಬೆಳಗಾವಿ , ಗುರುವಾರ, 19 ಏಪ್ರಿಲ್ 2018 (16:28 IST)
ಬೈಲಹೊಂಗಲ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಜಗದೀಶ್ ಮೆಟಗುಡ್ಡ ನಾಮ ಪತ್ರ ಸಲ್ಲಿಸಿದ್ದಾರೆ.
ಬೈಲಹೊಂಗಲ ವಿಧಾನ ಸಭಾ ಮತಕ್ಷೇತ್ರ  ಚುನಾವಣೆ ಅಧಿಕಾರಿ ಕೆ ದೊರೆಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಮೆಟಗುಡ್ಡ, ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರೂ ಬಿಜೆಪಿ ಪಕ್ಷ ಟಿಕೆಟ್ ನೀಡದೆ ಅನ್ಯಾಯವೆಸಗಿದೆ ಎಂದು ಕಿಡಿಕಾರಿದ್ದಾರೆ.
 
ಹಳೆ ಅಂಬಾಸಿಡರ್ ಕಾರ್‌ನಲ್ಲಿ ಬಂದು ಬೆಂಬಲಿಗರೊಂದಿಗೆ ಸಾಂಕೇತಿಕವಾಗಿ ನಾಮ ಪತ್ರ ಸಲ್ಲಿಸಿದ ಮಾಜಿ ಶಾಸಕ ಮೆಟಗುಡ್ಡ, ಕೆಜೆಪಿ ಹಾಲಿ ಶಾಸಕ ಡಾ ವಿಶ್ವನಾಥ ಪಾಟೀಲ ನಡುವೆ ಟಿಕೆಟ್ ತೀವ್ರ ಪೈಪೋಟಿ  ನಡೆದಿತ್ತು.
 
ಹಾಲಿ ಶಾಸಕ  ವಿಶ್ವನಾಥ ಪಾಟೀಲ್‌ಗೆ ಟಿಕೆಟ್ ನೀಡಿದ ಬಿಜೆಪಿ ಹೈಕಮಾಂಡ್ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮೆಟಗುಡ್ಡಗೆ ಟಿಕೆಟ್ ನಿರಾಕರಿಸಿತ್ತು.  ಈ ಬಾರಿ ಕೂಡಾ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮೇಟಗುಡ್ಡ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಬಿಎಸ್‌ವೈ ವಿರುದ್ಧ ಆಕ್ರೋಶ