Webdunia - Bharat's app for daily news and videos

Install App

ಬಿಜೆಪಿ ಅಧಿಕಾರಕ್ಕೆ ಬರಲ್ಲ: ಪ್ರಕಾಶ ರೈ ಭವಿಷ್ಯ

Webdunia
ಶನಿವಾರ, 28 ಏಪ್ರಿಲ್ 2018 (13:53 IST)
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲ್ಲ. ಜನ ಮೂರ್ಖರಲ್ಲ ಎಂದು ಸಂವಿಧಾನ ಉಳಿಸಿ ಸಮಾವೇಶದಲ್ಲಿ ನಟ ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ. 
ಮಂಗಳೂರು ದಕ್ಷಿಣದ ವೇದವ್ಯಾಸ್ ಕಾಮತ್ ಪತ್ನಿ ಹಿಂದುತ್ವದ ಹೆಸರಲ್ಲಿ ಓಟ್ ಕೇಳೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 
ಧರ್ಮದ ಹೆಸರಲ್ಲಿ ವಿಂಗಡಿಸಿ ಓಟ್ ಕೇಳಬೇಡಿ.‌ ಪ್ರಜಾಪ್ರಭುತ್ವದಲ್ಲಿ ಜಾತಿ ಧರ್ಮದ ಹೆಸರಲ್ಲಿ ಓಟು ಕೇಳುವ ಹಾಗಿಲ್ಲ ಎಂದು ಗುಡುಗಿದರು. 
 
ಹಿಂದೂ ಧರ್ಮವನ್ನು ಯಾರು ಗುತ್ತಿಗೆ ತೆಗೊಂಡಿಲ್ಲ. ಯಾವ ಧರ್ಮ ಕೂಡಾ ಧರ್ಮದ ಹೆಸರಲ್ಲಿ ರಾಜಕೀಯ ಮಾಡಬಾರದು. ಹೆಂಗಸರನ್ನು ಮರ್ಯಾದೆಯಿಂದ ನೋಡದ ಪಕ್ಷ ಅತ್ಯಾಚಾರಿಗಳನ್ನು ಬೆಂಬಲಿಸೋ ಪಕ್ಷ, ಬಿಜೆಪಿ ಪಕ್ಷಕ್ಕೆ ಯಾವುದೇ ಸಿದ್ದಾಂತ ಇಲ್ಲ ಎಂದು ವಾಗ್ದಾಳಿ ನಡೆಸಿದರು.
 
ಸಂಘದ ಸಿದ್ದಾಂತವೇ ಬಿಜೆಪಿ ಸಿದ್ದಾಂತ. ಬಿಜೆಪಿ ಬೆದರುಗೊಂಬೆ ಪಕ್ಷ. ಬಿಜೆಪಿಗೆ ಇಲ್ಲಿ ಮಾತನಾಡುವ ನಾಯಕರಿಲ್ಲ. ನಿಮ್ಮ ವಯಸ್ಸೇನು ಅಮಿತ್ ಶಾ ವಯಸ್ಸೇನು ಅವರ ಕಾಲಿಗೆ ಯಾಕೆ ಬೀಳ್ತೀರಿ ಎಂದಿದ್ದಾರೆ. ಅಮಿತ್ ಶಾಗೆ ಯಾವ ಅರ್ಹತೆ ಇದೆ ದೇಶ ಆಳಲು ಎಂದ ಅವರು 
ಅಮಿತ್ ಶಾ ಕುಟಿಲ ತಂತ್ರ ನಮ್ ದೇಶಕ್ಕೆ ಬೇಕಾದ ಯೋಗ್ಯತೆ ಅಲ್ಲ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದರು. 
 
ಮೋದಿಗೆ ಮತಿಭ್ರಮನೆ ಬಂದಿದೆ. ಗುಜರಾತ್ ನಲ್ಲಿ ಗುಜರಾತಿ ಎಂದು ಮಾತನಾಡ್ತಾರೆ. ಇವಾಗ ಕನ್ನಡಿಗ ಆಗಲು ಹೊರಟಿದ್ದಾರೆ. 2019 ರ ಬಳಿಕ ಮೋದಿ ನಿರುದ್ಯೋಗಿಯಾಗಲಿದ್ದಾರೆ. ಬಳಿಕ ಕರ್ನಾಟಕದ ವಯಸ್ಕರ ಶಾಲೆಗೆ ಬಂದು ಕನ್ನಡ ಕಲಿಯಿರಿ. ಪಕೋಡಾ ಮಾಡಿ ಎಂದು ಹೇಳುವ ಪ್ರಧಾನಿ ಚಾಯ್ ಮಾಡಲಿ. ರೆಡ್ಡಿ ಸಹೋದರರು ಬಂದರೆ ನಮ್ಮ ಬೆಟ್ಟ ಗುಡ್ಡಗಳನ್ಜು ಯಾರ ಕಾಪಾಡುವುದು ಎಂದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gun firing on Mutthappa Rai son Ricky rai:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ

Karnataka Weather: ಇಂದು ಮಳೆ ಈ ಜಿಲ್ಲೆಯವರಿಗೆ ಮಾತ್ರ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments