Webdunia - Bharat's app for daily news and videos

Install App

744 ಕೋಟಿ ಮೌಲ್ಯದ ನೀಲಮಣಿ ಪತ್ತೆ!

Webdunia
ಗುರುವಾರ, 29 ಜುಲೈ 2021 (08:27 IST)
ಕೊಲಂಬೋ(ಜು.29): ಮನೆಯಲ್ಲಿ ನೀರಿಗಾಗಿ ಬಾವಿ ತೋಡುತ್ತಿದ್ದ ವ್ಯಕ್ತಿಯೊಬ್ಬರಿಗೆ 510 ಕೇಜಿ ತೂಕದ ಬೃಹತ್ ನೀಲಮಣಿ ಶಿಲೆ ದೊರೆತ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.

* ಲಂಕಾದಲ್ಲಿ 744 ಕೋಟಿ ರೂ ಮೌಲ್ಯದ ನೀಲಮಣಿ ಪತ್ತೆ!
* ಬಾವಿ ತೋಡುತ್ತಿದ್ದ ವ್ಯಕ್ತಿಗೆ ಸಿಕ್ಕ 510 ಕೇಜಿ ಶಿಲೆ
* ಇದು ಜಗತ್ತಿನ ಅತಿದೊಡ್ಡ ನೀಲಮಣಿ: ತಜ್ಞರು
 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಅಪರೂಪದ ಹವಳದ ಬೆಲೆ 744 ಕೋಟಿ ರು. ಇರಬಹುದು ಎಂದು ತಜ್ಞರು ಅಂದಾಜಿಸಿದ್ದು, ಇದು ಈವರೆಗೆ ಜಗತ್ತಿನಲ್ಲಿ ದೊರೆತ ಅತಿದೊಡ್ಡ ನೀಲಮಣಿ ಎಂದು ಹೇಳಿದ್ದಾರೆ. ಇದಕ್ಕೆ ‘ಬೆರಗಿನ ನೀಲಮಣಿ’ ಎಂದು ನಾಮಕಾರಣ ಮಾಡಲಾಗಿದೆ.
ಶ್ರೀಲಂಕಾದ ರತ್ನಪುರ ನಗರದ ನಿವಾಸಿ ಗಾಮಗೆ ಎಂಬುವರು 1 ವರ್ಷದ ಹಿಂದೆ ಮನೆಯಲ್ಲಿ ಬಾವಿ ತೋಡುವಾಗ ಇದು ಲಭಿಸಿದೆ. ಇದನ್ನು ಶುಚಿಗೊಳಿಸಲು 1 ವರ್ಷ ಹಿಡಿದಿದ್ದು, ಈಗ ಇದು ಅಮೂಲ್ಯ ನೀಲಮಣಿ ಎಂದು ಖಚಿತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗಾಮಗೆ, ‘ನನ್ನ ಮನೆಯಲ್ಲಿ ಬಾವಿ ತೋಡಿಸುತ್ತಿದ್ದೆ. ಈ ವೇಳೆ ಅಪರೂಪದ ಬಂಡೆಯನ್ನು ನೋಡಿದ ಬಾವಿ ತೋಡುತ್ತಿದ್ದ ವ್ಯಕ್ತಿ ಈ ಬಗ್ಗೆ ನಮಗೆ ಮಾಹಿತಿ ನೀಡಿದ. ಬಳಿಕ ಇದೊಂದು ಅಪರೂಪದ ಮತ್ತು ಬೆಲೆಬಾಳುವ ನೀಲಮಣಿ ಎಂಬುದು ಗೊತ್ತಾಯಿತು’ ಎಂದು ಹೇಳಿದ್ದಾರೆ.
ತಮ್ಮ ಮನೆಯಲ್ಲಿ ನೀಲಮಣಿ ಪತ್ತೆಯಾಗಿರುವ ವಿಚಾರವನ್ನು ಗಾಮಗೆ ಅವರು ಸರ್ಕಾರಕ್ಕೆ ತಿಳಿಸಿದ್ದರು. ‘ಬಳಿಕ ನೀಲಮಣಿಗೆ ಅಂಟಿಕೊಂಡಿದ್ದ ಮಣ್ಣು ಮತ್ತು ಇನ್ನಿತರ ಭಾಗಗಳನ್ನು ಶುಚಿಗೊಳಿಸಲು ಒಂದು ವರ್ಷವೇ ಬೇಕಾಯಿತು. ಕೊನೆಗೆ ಇದು ಉತ್ತಮ ಗುಣಮಟ್ಟದ ನೀಲಮಣಿ ಎಂಬುದು ಖಚಿತವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ವಿಶ್ವದಲ್ಲೇ ಪತ್ತೆಯಾದ ವಿಶೇಷ ಮತ್ತು ಅತಿ ದೊಡ್ಡದಾದ ಹವಳವಾಗಿದ್ದು, ಖಾಸಗಿ ಸಂಗ್ರಹಕಾರರು ಮತ್ತು ಮ್ಯೂಸಿಯಂಗಳು ಇದನ್ನು ಖರೀದಿಸಲು ಮುಂದೆ ಬರಬಹುದು ಎಂದು ಶ್ರೀಲಂಕಾ ರಾಷ್ಟ್ರೀಯ ಹವಳ ಮತ್ತು ಜ್ಯುವೆಲರಿ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

CET exam: ಬ್ರಾಹ್ಮಣರ ಜನಿವಾರ ತೆಗೆಸಿದ್ದು ನಿಜ ಆದ್ರೆ ಕ್ರಮ ಕೈಗೊಳ್ತೀವಿ: ಸಚಿವ ಡಾ ಎಂಸಿ ಸುಧಾಕರ್

West Bengal: ಪಶ್ಚಿಮ ಬಂಗಾಲ ಹಿಂಸಾಚಾರದಲ್ಲಿ ಮೂಗುತೂರಿಸಿದ ಬಾಂಗ್ಲಾದೇಶ: ನಿಮ್ದು ನೀವು ನೋಡ್ಕೊಳ್ಳಿ ಎಂದ ಭಾರತ

Arecanut price today: ಅಡಿಕೆ, ಕಾಳುಮೆಣಸಿಗೆ ಬೆಲೆ ಇಂದು ಎಷ್ಟಾಗಿದೆ ನೋಡಿ

Gold Price today: ಚಿನ್ನ ಖರೀದಿ ಮಾಡುವವರಿಗೆ ಮತ್ತೆ ಶಾಕ್: ಇಂದಿನ ದರ ಎಷ್ಟಾಗಿದೆ ನೋಡಿ

Karnataka Caste census: ಕ್ಯಾಬಿನೆಟ್ ಸಭೆಯಲ್ಲಿ ಡಿಕೆ ಶಿವಕುಮಾರ್ ಕೆಂಡಾಮಂಡಲ: ಲಿಂಗಾಯತ, ಒಕ್ಕಲಿಗರಲ್ಲೂ ಬಡವರಿಲ್ವಾ

ಮುಂದಿನ ಸುದ್ದಿ
Show comments