Webdunia - Bharat's app for daily news and videos

Install App

ಸೆ.19 ಬೆಳಿಗ್ಗೆ ಮೋಹಿನಿ ಅವತಾರ

Webdunia
ತಿರುಪತಿ ಬ್ರಹ್ಮೋತ್ಸವದ ಐದನೇ ದಿನ, ಅಂದರೆ ಸೆ.19ರಂದು ಬೆಳಿಗ್ಗೆ ಮಹಾವಿಷ್ಣುವಿನ ಮೋಹಿನಿ ಅವತಾರವನ್ನು ನೆನಪಿಸುವ ಮೋಹಿನಿ ಅವತಾರೋತ್ಸವಂ ಜರುಗುತ್ತದೆ.

ಪುರಾಣದ ಪ್ರಕಾರ, ದೇವತೆಗಳು ಮತ್ತು ದಾನವರು ಕ್ಷೀರಸಾಗರ ಮಥನ ಮಾಡಿದಾಗ, ಅಮೃತ ಮತ್ತಿತರ ಸುವಸ್ತುಗಳು ಉತ್ಪತ್ತಿಯಾದವು. ಅಮೃತಕ್ಕಾಗಿ ದೈತ್ಯರು ಮತ್ತು ದೇವತೆಗಳು ನನಗೆ ಮೊದಲು, ತನಗೆ ಮೊದಲು ಎಂದು ಜಗಳಕ್ಕಿಳಿದಾಗ, ಮೋಹಿನಿ ಅವತಾರ ತಾಳಿ, ದಾನವರನ್ನು ಮರುಳುಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದ.

ದೇವರ ವಿಗ್ರಹವನ್ನು ಮೋಹಿನಿ ರೂಪದಲ್ಲಿ ಅಲಂಕಾರ ಮಾಡಲಾಗುತ್ತದೆ ಮತ್ತು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಕೃಷ್ಣ ದೇವರನ್ನು ಕೂಡ ಇದೇ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಕ್ಷೀರಸಾಗರ ಮಥನ ಕಾಲದಲ್ಲಿ ಮಹಾವಿಷ್ಣುವು ದೇವತೆಗಳಿಗೆ ನೀಡಿದ ಸಹಕಾರದ ಸ್ಮರಣೆಗಾಗಿ ಈ ಉತ್ಸವ.

ಬೆಳಿಗ್ಗೆ 9.00 ಗಂಟೆಯಿಂದ 11.00 ಗಂಟೆಯವರೆಗೆ ಈ ಉತ್ಸವ ಜರುಗಲಿದೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

Show comments