Webdunia - Bharat's app for daily news and videos

Install App

ತಿರುಪತಿಯಲ್ಲಿ ಬ್ರಹ್ಮೋತ್ಸವಾರಂಭ: ಪೆದ್ದ ಶೇಷವಾಹನೋತ್ಸವ

Webdunia
ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ನಡೆಯುತ್ತಿರುವ ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ಶ್ರೀ ವೆಂಕಟೇಶ್ವರ ದೇವಾಲಯದ ಧ್ವಜಸ್ತಂಭದಲ್ಲಿ ಗುರುವಾರ ಗರುಡ ಧ್ವಜಾರೋಹಣ ಮಾಡಲಾಯಿತು.

ರಾತ್ರಿ ಹತ್ತು ಗಂಟೆಯ ವೇಳೆಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪೆದ್ದ (ದೊಡ್ಡ ) ಶೇಷ ವಾಹನದಲ್ಲಿ ಕುಳ್ಳಿರಿಸಿ ಮುಖ್ಯ ದೇವಾಲಯದ ಸುತ್ತ ಇರುವ ನಾಲ್ಕು ಬೀದಿಗಳಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಸವಾರಿ ನಡೆಸಲಾಯಿತು.

ಸಾವಿರ ಹೆಡೆಯ ಆದಿ ಶೇಷನ ಮೇಲೆ ವೈಕುಂಠದಲ್ಲಿರುವ ಮಹಾ ವಿಷ್ಣು ವಿರಮಿಸುವ ಸಂಕೇತವಾಗಿ ಬ್ರಹ್ಮೋತ್ಸವದಲ್ಲಿ ಶೇಷ ವಾಹನ ಮೆರವಣಿಗೆ ನಡೆಸಲಾಗುತ್ತದೆ. ಭಕ್ತಾದಿಗಳು ಸಂಭ್ರಮದಿಂದ ಭಾಗವಹಿಸಿದ್ದರು.

ತಿರುಮಲ ಬೆಟ್ಟವು ಆದಿಶೇಷನ ಮೇಲೆಯೇ ಇದೆ ಎಂದು ನಂಬಲಾಗಿದ್ದು, ಈ ಹಿನ್ನೆಲೆಯಲ್ಲಿ ಬ್ರಹ್ಮೋತ್ಸವದ ಸಂದರ್ಭದಲ್ಲಿ ಸರ್ಪದ ಮಾದರಿಯಲ್ಲಿರುವ ವಾಹನ ಚಿನ್ನ (ಸಣ್ಣ)ಶೇಷ ವಾಹನ, ಪೆದ್ದ (ದೊಡ್ಡ)ಶೇಷ ವಾಹನಗಳನ್ನು ಬ್ರಹ್ಮೋತ್ಸವದ ಮೊದಲ ಎರಡು ದಿನ ಮೆರವಣಿಗೆ ನಡೆಸಲಾಗುತ್ತದೆ.
WD
ಅಕ್ಟೋಬರ ್‌ 1 ರಂದ ು ಬೆಳಗ್ಗ ೆ ಚಿನ್ ನ( ಚಿಕ್ ಕ) ಶೇ ಷ ವಾಹ ನ ಮುತ್ಯಾಪ ು ಪುಂದಿರ ಿ ವಾಹ ನ, ಅ. 2 ರ ಬೆಳಗ್ಗ ೆ ಕಲ್ಪವೃಕ್ ಷ ವಾಹ ನ ಸಂಜ ೆ ಸರ್ ವ ಭೂಪಾ ಲ ವಾಹ ನ
ಕಾರ್ಯಕ್ರ ಮ ನಡೆಯಲಿದ ೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments