Webdunia - Bharat's app for daily news and videos

Install App

ಕಚ್ಚಾಡುತ್ತಿದ್ದ ಅಭಿಮಾನಿಗಳನ್ನು ಒಂದು ಮಾಡಲು ವಾಹಿನಿಯೇ ಮಾಡಿದೆ ತಂತ್ರ

Webdunia
ಗುರುವಾರ, 13 ಆಗಸ್ಟ್ 2020 (12:54 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಮತ್ತು ಜೊತೆ ಜೊತೆಯಲಿ ಧಾರವಾಹಿಗಳ ನಡುವೆ ಟಿಆರ್ ಪಿ ವಿಚಾರದಲ್ಲಿ ಪೈಪೋಟಿ ನಡೆಯುತ್ತಲೇ ಇರುತ್ತದೆ. ಇವೆರಡೂ ಧಾರವಾಹಿಗಳ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕಚ್ಚಾಡುತ್ತಲೇ ಇರುತ್ತಾರೆ. ಇದೀಗ ಎರಡೂ ಧಾರವಾಹಿಗಳ ಅಭಿಮಾನಿಗಳನ್ನು ಒಂದು ಮಾಡಲು ವಾಹಿನಿ ತಂತ್ರ ಹೆಣೆದಿದೆ.


ನಮ್ಮ ಧಾರವಾಹಿಯೇ ಮೇಲು ಎಂದು ಪರಸ್ಪರ ಕಚ್ಚಾಟ ನಡೆಸುವ ಅಭಿಮಾನಿಗಳನ್ನು ಒಂದು ಮಾಡಲು ಜೀ ಕನ್ನಡ ವಾಹಿನಿ ಮುಂದಿನ ವಾರ ಎರಡೂ ಧಾರವಾಹಿಗಳ ಕಲಾವಿದರನ್ನು ಒಗ್ಗೂಡಿಸುತ್ತಿದೆ. ಅಂದರೆ ಗಟ್ಟಿಮೇಳ ಧಾರವಾಹಿಯ ಪಾತ್ರಧಾರಿಗಳು ಜೊತೆ ಜೊತೆಯಲಿ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೂಲಕ ಎರಡೂ ಧಾರವಾಹಿಗಳ ಅಭಿಮಾನಿಗಳು ಅನಿವಾರ್ಯವಾಗಿಯಾದರೂ ಒಂದು ವಾರ ಶಾಂತವಾಗಿರಲೇ ಬೇಕು. ಈಗಾಗಲೇ ಜೀ ವಾಹಿನಿ ಇದರ ಬಗ್ಗೆ ಸಮೀಕ್ಷೆ ಕೂಡಾ ನಡೆಸಿದೆ. ಅದರಲ್ಲೂ ಹೆಚ್ಚು ಜನರೂ ಎರಡೂ ಧಾರವಾಹಿಯ ಕಲಾವಿದರನ್ನು ಒಂದೇ ಫ್ರೇಮ್ ನಲ್ಲಿ ನೋಡಲು ಬಯಸುವುದಾಗಿ ಮತ ಹಾಕಿದ್ದಾರೆ. ಹೀಗಾಗಿ ಮುಂದಿನ ವಾರ ವೀಕ್ಷಕರಿಗೆ ಹಬ್ಬವಾಗಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments