Webdunia - Bharat's app for daily news and videos

Install App

ಕಚ್ಚಾಡುತ್ತಿದ್ದ ಅಭಿಮಾನಿಗಳನ್ನು ಒಂದು ಮಾಡಲು ವಾಹಿನಿಯೇ ಮಾಡಿದೆ ತಂತ್ರ

Webdunia
ಗುರುವಾರ, 13 ಆಗಸ್ಟ್ 2020 (12:54 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಮತ್ತು ಜೊತೆ ಜೊತೆಯಲಿ ಧಾರವಾಹಿಗಳ ನಡುವೆ ಟಿಆರ್ ಪಿ ವಿಚಾರದಲ್ಲಿ ಪೈಪೋಟಿ ನಡೆಯುತ್ತಲೇ ಇರುತ್ತದೆ. ಇವೆರಡೂ ಧಾರವಾಹಿಗಳ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕಚ್ಚಾಡುತ್ತಲೇ ಇರುತ್ತಾರೆ. ಇದೀಗ ಎರಡೂ ಧಾರವಾಹಿಗಳ ಅಭಿಮಾನಿಗಳನ್ನು ಒಂದು ಮಾಡಲು ವಾಹಿನಿ ತಂತ್ರ ಹೆಣೆದಿದೆ.


ನಮ್ಮ ಧಾರವಾಹಿಯೇ ಮೇಲು ಎಂದು ಪರಸ್ಪರ ಕಚ್ಚಾಟ ನಡೆಸುವ ಅಭಿಮಾನಿಗಳನ್ನು ಒಂದು ಮಾಡಲು ಜೀ ಕನ್ನಡ ವಾಹಿನಿ ಮುಂದಿನ ವಾರ ಎರಡೂ ಧಾರವಾಹಿಗಳ ಕಲಾವಿದರನ್ನು ಒಗ್ಗೂಡಿಸುತ್ತಿದೆ. ಅಂದರೆ ಗಟ್ಟಿಮೇಳ ಧಾರವಾಹಿಯ ಪಾತ್ರಧಾರಿಗಳು ಜೊತೆ ಜೊತೆಯಲಿ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೂಲಕ ಎರಡೂ ಧಾರವಾಹಿಗಳ ಅಭಿಮಾನಿಗಳು ಅನಿವಾರ್ಯವಾಗಿಯಾದರೂ ಒಂದು ವಾರ ಶಾಂತವಾಗಿರಲೇ ಬೇಕು. ಈಗಾಗಲೇ ಜೀ ವಾಹಿನಿ ಇದರ ಬಗ್ಗೆ ಸಮೀಕ್ಷೆ ಕೂಡಾ ನಡೆಸಿದೆ. ಅದರಲ್ಲೂ ಹೆಚ್ಚು ಜನರೂ ಎರಡೂ ಧಾರವಾಹಿಯ ಕಲಾವಿದರನ್ನು ಒಂದೇ ಫ್ರೇಮ್ ನಲ್ಲಿ ನೋಡಲು ಬಯಸುವುದಾಗಿ ಮತ ಹಾಕಿದ್ದಾರೆ. ಹೀಗಾಗಿ ಮುಂದಿನ ವಾರ ವೀಕ್ಷಕರಿಗೆ ಹಬ್ಬವಾಗಿರಲಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments