Webdunia - Bharat's app for daily news and videos

Install App

ಮತ್ತದೇ ತಪ್ಪು ಮಾಡಿದ ಸಿಹಿಕಹಿ ಚಂದ್ರು.. ಅಪ್ಪನ ವಿರುದ್ಧ ಮಕ್ಕಳು ಗರಂ..!

Webdunia
ಶುಕ್ರವಾರ, 3 ನವೆಂಬರ್ 2017 (10:36 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸತತವಾಗಿ 2ನೇ ದಿನವೂ ಅದೇ ತಪ್ಪು ನಡೆದ ಪರಿಣಾಮ ಬಿಗ್ ಬಾಸ್ ಮನೆಗೆ ಗ್ಯಾಸ್ ಪೂರೈಕೆ ಸ್ಥಗಿತ ಮಾಡಿದ್ದರು. ಕರ್ನಾಟಕ ರಾಜ್ಯೋತ್ಸವದಂದು ಮನೆಯ ಸದಸ್ಯರು ಮತ್ತೆ ಉಪವಾಸ ಇರಬೇಕಾಯಿತು.

ಬೆಳಗ್ಗೆ ತಿಂಡಿ ರೆಡಿ ಮಾಡಿದ್ದ ಸಿಹಿಕಹಿ ಚಂದ್ರು ಗ್ಯಾಸ್ ಸ್ಟೌವ್ ಆರಿಸಲು ಮರೆತಿದ್ದರು. ಇದನ್ನು ಗಮನಿಸಿದ ಬಿಗ್ ಬಾಸ್ ಎಲ್ಲರನ್ನೂ ಲಿವಿಂಗ್ ಏರಿಯಾಗೆ ಕರೆದು ವಿಡಿಯೋ ಪ್ಲೇ ಮಾಡಿದಾಗ ಎಲ್ಲರ ಮುಖ ಚಿಕ್ಕದಾಯಿತು. ತನ್ನ ತಪ್ಪು ಅರಿತ ಚಂದ್ರು ಕ್ಯಾಮೆರಾ ಎದುರು ಬಂದು ತಪ್ಪಿನ ಅರಿವಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಹೀಗೆ ಆಗುವುದಿಲ್ಲ ಎಂದು ಕೇಳಿಕೊಂಡರು.

ಇತ್ತ ಗಾರ್ಡನ್ ಏರಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ನಾನು ಇದೇ ತಪ್ಪು ಮಾಡಿದಾಗ ಜೋರಾಗಿ ಬಂದು ಹೇಳಿದವರು, ಈಗ ಅವರು ತಪ್ಪು ಮಾಡಿದಾಗ ಸೈಲೆಂಟ್ ಆಗಿ ಬಂದು ನಾನೇ ತಪ್ಪು ಮಾಡಿದ್ದು ಎಂದರು. ನನಗೇನೋ ಅಡುಗೆ ಮಾಡಿ ಅನುಭವವಿಲ್ಲ. ಆದರೆ ಅವರು ಅದರಲ್ಲೇ ಪಳಗಿದವರು ಹೀಗೆ ಮಾಡುವುದೇ ಎಂದು ಜಯ ಶ್ರೀನಿವಾಸ್ ಲೇವಡಿ ಮಾಡಿದರು.

ಇತ್ತ ಇಡೀ ದಿನ ಮನೆಯಲ್ಲಿ ಉಪವಾಸ ಇದ್ದ ಸ್ಪರ್ಧಿಗಳು ಗರಂ ಆದರು. ಕೃಷಿ ಮೈಕ್ರೋವೇವ್ ಓವನ್ ನಲ್ಲಿ ಮೊಟ್ಟೆ ಬೇಯಿಸಲು ಸಲಹೆ ನೀಡಿದರು. ಇದಕ್ಕೆ ಸಿಟ್ಟಾದ ತೇಜಸ್ವಿನಿ, ಯಾರು ಏನು ಮಾಡಬೇಡಿ. ಒಮ್ಮೆ ಉಪವಾಸ ಇದ್ರೆ ಎಲ್ಲರು ಬುದ್ಧಿ ಕಲೀತಾರೆ. ಇನ್ನೊಮ್ಮೆ ಹೀಗೆ ಆಗೋದಿಲ್ಲ ಎಂದು ಸಿಡುಕಿದ್ರು.
ಮತ್ತೊಮ್ಮೆ ಚಂದ್ರು ಕ್ಯಾಮೆರಾ ಎದುರು ಕ್ಷಮೆ ಕೋರಿದರು. ಆಗ ಬಿಗ್ ಬಾಸ್ ಮನೆಗೆ ಗ್ಯಾಸ್ ಪೂರೈಕೆ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಮುಂದಿನ ಸುದ್ದಿ
Show comments