Select Your Language

Notifications

webdunia
webdunia
webdunia
webdunia

ದೇವೇಗೌಡರನ್ನು ಭೇಟಿ ಮಾಡಿದ ಬಿಗ್ ಬಾಸ್ ವಿನ್ನರ್

ದೇವೇಗೌಡರನ್ನು ಭೇಟಿ ಮಾಡಿದ ಬಿಗ್ ಬಾಸ್ ವಿನ್ನರ್
Bangalore , ಸೋಮವಾರ, 20 ಫೆಬ್ರವರಿ 2017 (11:41 IST)
ಕಲರ್ಸ್ ಕನ್ನಡ ವಾಹಿನಿಯ ’ಬಿಗ್ ಬಾಸ್ ಸೀಸನ್ 4’ ವಿನ್ನರ್ ’ಒಳ್ಳೆ ಹುಡುಗ’ ಪ್ರಥಮ್ ಇತ್ತೀಚೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ. ಬಿಗ್ ಬಾಸ್ ಮನೆ ಸೇರುವುದಕ್ಕೂ ಮುನ್ನ ದೇವೇಗೌಡರ ಆಶೀರ್ವಾದ ಪಡೆದು ಮನೆಗೆ ಪ್ರವೇಶಿಸಿದ್ದರು ಪ್ರಥಮ್.
 
ಈಗ ವಿನ್ ಆದ ಮೇಲೂ ಪದ್ಮನಾಭನಗರದ ಅವರ ಮನೆಗೆ ಭೇಟಿ ನೀಡಿ ದೇವೇಗೌಡ ಮತ್ತವರ ಪತ್ನಿ ಚೆನ್ನಮ್ಮ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಕೇವಲ ಆಶೀರ್ವಾದ ಅಷ್ಟೇ ಅಲ್ಲದೆ ದೇವೇಗೌಡರ ಜತೆಗೆ ಊಟವನ್ನೂ ಮಾಡಿದ್ದಾರೆ. 
 
ಬಿಗ್ ಬಾಸ್ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಅದರಲ್ಲಿ ಬಂದ ಬಹುಮಾನದ ಹಣವನ್ನು ಕಷ್ಟದಲ್ಲಿರುವವರಿಗೆ, ರೈತರಿಗೆ, ಯೋಧರಿಗೆ ಕೊಡುವುದಾಗಿ ಘೋಷಿಸಿದ್ದರು ಪ್ರಥಮ್. ಅದರಂತೆ ಈಗಾಗಲೆ ರೂ.50,000 ಯೋಧರ ಕುಟುಂಬಕ್ಕೆ ನೀಡಿದ್ದಾರೆ. ಈಗಾಗಲೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರನ್ನೂ ಭೇಟಿಯಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಥಿಯೇಟರ್‌ಗೆ ಬರಲು ಸಿದ್ಧವಾಗುತ್ತಿರುವ ’ಹುಲಿರಾಯ’