Webdunia - Bharat's app for daily news and videos

Install App

ಹಾಲು ಕದ್ದ ಕಳ್ಳಬೆಕ್ಕುಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್...

Webdunia
ಸೋಮವಾರ, 6 ನವೆಂಬರ್ 2017 (23:09 IST)
ಬೆಂಗಳೂರು: `ವಾರದ ಕತೆ ಕಿಚ್ಚನ ಜತೆ’ ಬಿಸಿ ಬಿಸಿ ಚರ್ಚೆಗೆ ಕಾರಣವಾಯ್ತು. ಹಾಲಿನ ವಿಷಯ ಸ್ವಲ್ಪ ಕೋಲಾಹಲವನ್ನೇ ಎಬ್ಬಿಸಿತು. ಇದಕ್ಕೆ ಕಿಚ್ಚ ಸುದೀಪ್ ಕೂಡ ಗರಂ ಆದರು.

ಸಮೀರ್ ಆಚಾರ್ಯಗೆ ಟೀ ಬದಲು ಹಾಲು ಸೇವಿಸಲು ಒಂದು ಲೋಟ ಹಾಲು ನೀಡಿರಲಿಲ್ಲ. ಎರಡು ದಿನಕ್ಕೆ ಮಾತ್ರ ಹಾಲಿದೆ ಎಂದು ಹಾಲು ನೀಡಲು ಚಂದ್ರು, ದಯಾಳ್‌ ಹಾಗೂ ಆಶಿತಾ ನಿರಾಕರಿಸಿದ್ರು. ಇದು ಇಷ್ಟಕ್ಕೆ ಮುಗಿಯದೆ ದೊಡ್ಡ ಚರ್ಚೆಗೆ ನಾಂದಿಯಾಡಿತು.

ಆದರೆ ಅಲ್ಲಿ ಹಾಲು ಕಡಿಮೆಯಾಗಲು ಕಾರಣವೇನು ಎಂದು ಸ್ವಲ್ಪಹೊತ್ತಲ್ಲೇ ತಿಳಿಯಿತು. ಬಿಗ್‌ ಬಾಸ್‌ ನೀಡಿದ್ದ ಹಾಲನ್ನು ನೀಡಿದ ದಿನವೇ ದಯಾಳ್‌, ಕೃಷಿ ಹಾಗೂ ಅನುಪಮಾ ಹಾಲಿನ ಪ್ಯಾಕೇಟ್‌ ಗಳನ್ನು ಮುಚ್ಚಿಟ್ಟಿದ್ದರು. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಜಗಳವಾದ ಬಳಿಕ ಈ ವಿಷಯ ಸಿಹಿ ಕಹಿ ಚಂದ್ರುಗೆ ತಿಳಿದಿದೆ. ದಯಾಳ್‌ ತೆಗೆದುಕೊಂಡ ಕ್ರಮ ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವಿಷಯವನ್ನ ಗಂಭೀರವಾಗಿ ಚರ್ಚೆಗೆ ತೆಗೆದುಕೊಂಡ ಸುದೀಪ್, ಹಾಲು ಬಚ್ಚಿಟ್ಟವರಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಬೇರೆಯವರಿಗೆ ಕುಡಿಯಲು ಹಾಲು ಇಲ್ಲದ ವೇಳೆ ಹೀಗೆ ತೆಗೆದಿಡುವುದು ಸರಿಯಲ್ಲ ಎಂದರು. ಆದರೆ ದಯಾಳ್ ಮಾತ್ರ ತಾವು ಮಾಡಿದ್ದು ಸರಿ ಎಂದೇ ವಾದಿಸಿದರು. ಇನ್ನು ಮುಂದೆ ಹೀಗಾಗದಂತೆ ಎಚ್ಚೆತ್ತುಕೊಳ್ಳಿ ಎಂದು ಕಿಚ್ಚ ಸುದೀಪ್ ಬುದ್ಧಿವಾದ ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಮುಂದಿನ ಸುದ್ದಿ
Show comments