Select Your Language

Notifications

webdunia
webdunia
webdunia
webdunia

ಗರ್ಭಿಣಿ ಪತ್ನಿಯ ಒಂಟಿ ಮಾಡಿ ಆತ್ಮಹತ್ಯೆ ಮಾಡಿಕೊಂಡ ಕನ್ನಡ ಕಿರುತೆರೆ ನಟ

ಗರ್ಭಿಣಿ ಪತ್ನಿಯ ಒಂಟಿ ಮಾಡಿ ಆತ್ಮಹತ್ಯೆ ಮಾಡಿಕೊಂಡ ಕನ್ನಡ ಕಿರುತೆರೆ ನಟ
ಬೆಂಗಳೂರು , ಭಾನುವಾರ, 23 ಏಪ್ರಿಲ್ 2023 (19:17 IST)
Photo Courtesy: Twitter
ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿಯಲ್ಲಿ ನಾಯಕಿ ಸನ್ನಿಧಿಯ ಅಣ್ಣನ ಪಾತ್ರ ಮಾಡುತ್ತಿದ್ದ ಕಿರುತೆರೆ ನಟ ಸಂಪತ್ ಜಯರಾಮ್ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೆಲಮಂಗಲದ ತಮ್ಮ ನಿವಾಸದಲ್ಲಿ ನಿನ್ನೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರುತೆರೆಯಲ್ಲಿ ಕೆಲವೊಂದು ಅವಕಾಶ ಗಿಟ್ಟಿಸುತ್ತಿದ್ದ ಸಂಪತ್ ಅವಕಾಶಗಳ ಕೊರತೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಪರ್ಯಾಸವೆಂದರೆ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಸಂಪತ್ ಪತ್ನಿ ಈಗ ಗರ್ಭಿಣಿ. ಗರ್ಭಿಣಿ ಪತ್ನಿಯನ್ನು ಒಂಟಿಯಾಗಿ ಮಾಡಿ ಸಂಪತ್ ಇಹಲೋಕದ ಯಾತ್ರೆ ಮುಗಿಸಿದ್ದು ದುರಂತ. ಅವರ ಸಾವಿಗೆ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೃತವರ್ಷಣಿ ನಟ ಶರತ್ ಬಾಬು ಸ್ಥಿತಿ ಗಂಭೀರ