Webdunia - Bharat's app for daily news and videos

Install App

ದಯಾಳ್ ಮನೆಯಿಂದ ಔಟ್: ಅನುಪಮಾ ಕಣ್ಣೀರಿಗೆ ಕರಗಿದ ಜಗನ್

Webdunia
ಸೋಮವಾರ, 6 ನವೆಂಬರ್ 2017 (13:32 IST)
ಬೆಂಗಳೂರು: ಮೂರೇ ವಾರದಲ್ಲಿ ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆದುಕೊಂಡಂತಿದೆ.

ದಯಾಳ್‌ ಪದ್ಮನಾಭ್‌ ಬಿಗ್‌ ಬಾಸ್ ಮನೆಯಿಂದ ಮೂರನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಬರೋಕು ಮೊದಲು ಕೆಲವರ ಜತೆ ಸಿಕ್ಕಾಪಟ್ಟೆ ಜಗಳವಾಡಿಕೊಂಡರೆ, ಇನ್ನು ಕೆಲವರ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ಅನುಪಮಾ ಹಾಗೂ ದಯಾಳ್‌ ನಡುವೆ ಕೊಂಚ ಹೆಚ್ಚೇ ಆತ್ಮೀಯತೆ ಬೆಳೆದುಕೊಂಡಿತ್ತು. ದಯಾಳ್‌ ಮನೆಯಿಂದ ಹೊರಹೋಗುವ ವೇಳೆ ಎಲ್ಲರೂ ಭಾವುಕರಾದ್ರೆ, ಅನುಪಮಾ ಕೊಂಚ ಹೆಚ್ಚಿಗೆ ಭಾವುಕರಾಗಿ ಕಣ್ಣೀರು ಹಾಕಿದ್ರು.

ಮನೆಯಿಂದ ಹೊರಹೋಗುವ ಮುನ್ನ ದಯಾಳ್‌ ಕೂಡ ಕಣ್ಣೀರು ಹಾಕಿದ್ರು. ಮೂರ್ನಾಲ್ಕು ಬಾರಿ ಅನುಪಮಾ ಅವರನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ರು. ಇವಳನ್ನು ಚೆನ್ನಾಗಿ ನೋಡ್ಕೊಳ್ಳೆ ಎಂದು ಎಲ್ಲರಿಗೂ ಹೇಳಿ ಹೋದರು. ದಯಾಳ್‌ ಬಿಗ್‌ ಬಾಸ್‌ ಮನೆಯಿಂದ ಹೊರಹೋದ ಮೇಲೆಯೂ ಅನುಪಮಾ ಅಳೋದು ನಿಲ್ಲಿಸಿರಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅನುಪಮಾಳ ಬಳಿ ಬಂದ ಜಗನ್‌, ಸಮಾಧಾನ ಹೇಳುವ ಪ್ರಯತ್ನ ಮಾಡಿದ್ರು. ಅವರು ಎಲ್ಲೂ ಹೋಗಿಲ್ಲ. ಹೊರಗಡೆ ಹೋದ ಮೇಲೆ ಸಿಗ್ತಾರೆ ಅಳೋದು ನಿಲ್ಲಿಸು ಎಂದು ಕೇಳಿಕೊಂಡ್ರು ಜಗನ್‌. ನೀನ್ ಹೋಗು ನಾನಿಲ್ಲೆ ಇದ್ದು ಆಮೇಲೆ ಬರ್ತೀನಿ ಎಂದ್ರು ಅನುಪಮಾ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments