Webdunia - Bharat's app for daily news and videos

Install App

ಬಿಬಿಕೆ9: ‘ದುರಾಸೆ’ ಎಂಬ ಪದದಿಂದ ಇಬ್ಬಾಗವಾದ ಮನೆ

Webdunia
ಬುಧವಾರ, 26 ಅಕ್ಟೋಬರ್ 2022 (09:50 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ನಿನ್ನೆ ದಿನ ಅರುಣ್ ಸಾಗರ್ ದುರಾಸೆ ಎಂಬ ಪದ ಬಳಸಿದ್ದು ಇಡೀ ಮನೆ ಹತ್ತಿ ಉರಿಯುವಂತೆ ಮಾಡಿದೆ.

ದೀಪಾವಳಿ ಹಬ್ಬದ ನಿಮಿತ್ತ ಮನೆಯವರಿಂದ ಉಡುಗೊರೆ ಪಡೆಯಲು ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಈ ಟಾಸ್ಕ್ ಆಡುವ ವಿಚಾರವಾಗಿ ಕ್ಯಾಪ್ಟನ್ ಸಾನಿಯಾ ನೇತೃತ್ವದಲ್ಲಿ ಮನೆ ಮಂದಿ ಯಾರೆಲ್ಲಾ ಟಾಸ್ಕ್ ಆಡಬೇಕು ಎಂದು ಚರ್ಚೆ ಮಾಡುತ್ತಿದ್ದರು. ಈ ವೇಳೆ ಅರುಣ್ ಸಾಗರ್ ಕ್ಯಾಪ್ಟನ್ಸಿ ಪಾಯಿಂಟ್ ಬೇಕು, ಮನೆಯವರ ಉಡುಗೊರೆಯೂ ಬೇಕು ಎಂಬುದು ದುರಾಸೆ ಎಂದಿದ್ದರು.

ಅವರ ಈ ಮಾತು ನೇಹಾ ಗೌಡ, ರೂಪೇಶ್ ರಾಜಣ್ಣ ಸೇರಿದಂತೆ ಮನೆಯ ಕೆಲವು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ನೀವು ಹಾಗೆ ಹೇಳಿದ್ದು ತಪ್ಪು ಎಂದು ಮೊದಲು ರೂಪೇಶ್ ರಾಜಣ್ಣ ಮತ್ತು ನೇಹಾ ಗೌಡ ಅರುಣ್ ಸಾಗರ್ ಗೆ ಮನವರಿಕೆ ಮಾಡಲು ಶುರು ಮಾಡಿದರು. ಈ ವೇಳೆ ರೂಪೇಶ್ ರಾಜಣ್ಣ ಮತ್ತು ಅರುಣ್ ಸಾಗರ್ ನಡುವೆ ಬಿರುಸಿನ ಮಾತಾಯಿತು. ಈ ನಡುವೆ ಪ್ರಶಾಂತ್ ಸಂಬರಗಿ ಅರುಣ್ ಸಾಗರ್ ಪರವಾಗಿ ಮಾತನಾಡಲು ಬಂದಾಗ ಪ್ರಶಾಂತ್ ಮತ್ತು ರೂಪೇಶ್ ನಡುವೆ ಮಾತಿನ ಚಕಮಕಿ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.

ಹಾಗಿದ್ದರೂ ಈ ವಾದ ಅಲ್ಲಿಗೇ ನಿಲ್ಲಲಿಲ್ಲ. ಇಂದಿನ ಸಂಚಿಕೆಯಲ್ಲೂ ಇವರ ವಾದ-ವಿವಾದ ಮುಂದುವರಿಯಲಿದೆ. ಇದೀಗ ನೆಟ್ಟಿಗರು ಕೆಲವರು ಅರುಣ್ ಸಾಗರ್ ಈ ರೀತಿ ಮಾತನಾಡಿದ್ದು ತಪ್ಪು ಎಂದರೆ, ಇನ್ನು ಕೆಲವರು ಸರಿಯಾಗಿ ಹೇಳಿದ್ದಾರೆ ಎಂದು ಸಮರ್ಥಿಸಿದ್ದಾರೆ.

-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments