Select Your Language

Notifications

webdunia
webdunia
webdunia
webdunia

ದೇಶ ಕಾಯುವ ಯೋಧನ ಕೈ ಹಿಡಿಯಲಿರುವ ಗಿಣಿರಾಮ ಧಾರವಾಹಿ ನಟಿ ಕಾವೇರಿ

ದೇಶ ಕಾಯುವ ಯೋಧನ ಕೈ ಹಿಡಿಯಲಿರುವ ಗಿಣಿರಾಮ ಧಾರವಾಹಿ ನಟಿ ಕಾವೇರಿ
ಬೆಂಗಳೂರು , ಬುಧವಾರ, 14 ಜೂನ್ 2023 (08:20 IST)
Photo Courtesy: facebook
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಣಿರಾಮ ಧಾರವಾಹಿ ಮೂಲಕ ಜನಪ್ರಿಯರಾಗಿದ್ದ ನಟಿ ಕಾವೇರಿ ಬಾಗಲಕೋಟೆ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸಿಹಿ ಸುದ್ದಿ ನೀಡಿದ್ದಾರೆ.

ಕೆಲವು ದಿನಗಳ ಕಾಲ ನಾಯಕನ ತಂಗಿ ಸೀಮಾ ಪಾತ್ರ ಮಾಡಿದ್ದ ನಟಿ ಕಾವೇರಿ ಬಳಿಕ ಧಾರವಾಹಿಯಿಂದ ಹೊರಬಂದಿದ್ದರು. ಇದೀಗ ತಮ್ಮ ಮದುವೆ ಸುದ್ದಿ ನೀಡಿದ್ದಾರೆ.

8 ವರ್ಷಗಳ ಕಾಲ ಪ್ರೀತಿಸಿ ತಮ್ಮ ಮೆಚ್ಚಿನ ಹುಡುಗನನ್ನು ಮದುವೆಯಾಗುತ್ತಿದ್ದಾರೆ ಕಾವೇರಿ. ಅಂದ ಹಾಗೆ ಅವರು ಮದುವೆಯಾಗುತ್ತಿರುವ ಹುಡುಗ ದೇಶ ಕಾಯುವ ಯೋಧ. ಸೈನಿಕನ ಹೆಂಡತಿಯಾಗುತ್ತಿದ್ದೇನೆ ಎನ್ನಲು ನನಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ ಕಾವೇರಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ‘ಟೋಬಿ’: ಈ ಸಿನಿಮಾ ಕತೆಗೆ ಸ್ಪೂರ್ತಿ ಏನು?