Select Your Language

Notifications

webdunia
webdunia
webdunia
webdunia

ಇಂಡೋನೇಷ್ಯಾ ಓಪನ್: ಪ್ರಶಸ್ತಿ ಮುಡಿಗೇರಿಸಿಕೊಂಡ ಕಿದಾಂಬಿ ಶ್ರೀಕಾಂತ್

ಇಂಡೋನೇಷ್ಯಾ ಓಪನ್: ಪ್ರಶಸ್ತಿ ಮುಡಿಗೇರಿಸಿಕೊಂಡ ಕಿದಾಂಬಿ ಶ್ರೀಕಾಂತ್
ಜಕಾರ್ತ , ಭಾನುವಾರ, 18 ಜೂನ್ 2017 (17:01 IST)
ಇಂಡೋನೇಷ್ಯಾ ಬ್ಯಾಡ್ಮಿಂಟನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜಯಭೇರಿ ದಾಖಲಿಸಿದ ಭಾರತ ಕಿದಾಂಬಿ ಶ್ರೀಕಾಂತ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 
 
ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 22 ನೇ ಕ್ರಮಾಂಕದಲ್ಲಿರುವ ಶ್ರೀಕಾಂತ್, ತಮ್ಮ ಜಪಾನ್ ಎದುರಾಳಿ 47ನೇ ಶ್ರೇಯಾಂಕಿತ ಕಜುಮಸಾ ಸಕಾಯಿಯನ್ನು 37 ನಿಮಿಷಗಳ ಪಂದ್ಯದಲ್ಲಿ 21-11 21-19 ಅಂತರದಿಂದ ಸೋಲಿಸಿ 75 ಸಾವಿರ ಡಾಲರ್ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. 
 
ಪ್ರತಿಷ್ಠಿತ ಪಂದ್ಯಾವಳಿ ಎಂದು ಪರಿಗಣಿಸಲ್ಪಡುವ ಇಂಡೋನೇಷ್ಯಾ ಸೂಪರ್ ಸರಣಿಯಲ್ಲಿ ಗೆಲುವು ಸಾಧಿಸಿದ್ದೇನೆ. ಮುಂದಿನ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
 
ಕಜುಮಸಾ ಸಕಾಯಿ ವಿಶೇಷವಾಗಿ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು 2014 ರ ಚೀನಾ ಸೂಪರ್ ಸೀರೀಸ್ ಪ್ರೀಮಿಯರ್ ಮತ್ತು 2015 ರಲ್ಲಿ ಇಂಡಿಯನ್ ಸೂಪರ್ ಸಿರೀಸ್ ಗೆದ್ದ ಕಿದಾಂಬಿ ಶ್ರೀಕಾಂತ್ ತಿಳಿಸಿದ್ದಾರೆ..
 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಟಾಸ್ ಗೆದ್ದ ಕೂಡಲೇ ಮೈದಾನದಲ್ಲಿ ಮೊಳಗಿತು ಹರ್ಷೋದ್ಗಾರ!