Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಓಪನ್ ಗೆದ್ದ ಕಿದಂಬಿ ಶ್ರೀಕಾಂತ್ ಬಗ್ಗೆ ಸಚಿನ್ ಹೇಳಿದ್ದ ಭವಿಷ್ಯ ನಿಜವಾಯಿತು!

ಆಸ್ಟ್ರೇಲಿಯಾ ಓಪನ್ ಗೆದ್ದ ಕಿದಂಬಿ ಶ್ರೀಕಾಂತ್ ಬಗ್ಗೆ ಸಚಿನ್ ಹೇಳಿದ್ದ ಭವಿಷ್ಯ ನಿಜವಾಯಿತು!
Mumbai , ಸೋಮವಾರ, 26 ಜೂನ್ 2017 (09:27 IST)
ಮುಂಬೈ: ನಿನ್ನೆಯಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಕಿದಂಬಿ ಶ್ರೀಕಾಂತ್ ಗೆ ಸಚಿನ್ ತೆಂಡುಲ್ಕರ್ ಎಂದರೆ ಅಚ್ಚುಮೆಚ್ಚು.

 
ಹಿಂದೊಮ್ಮೆ ಸಚಿನ್ ರನ್ನು ಭೇಟಿಯಾಗಿದ್ದಾಗ ಅವರು ಶ್ರೀಕಾಂತ್ ಗೆ ಮುಂದೊಂದು ದಿನ ನೀನು ನಂ.1 ಆಗಿಯೇ ಆಗುತ್ತೀಯಾ ಎಂದು ಭವಿಷ್ಯ ನುಡಿದಿದ್ದರಂತೆ. ಅದರಂತೆ ಇದೀಗ ಸತತ ಎರಡು ಸೂಪರ್ ಸೀರೀಸ್ ಗೆದ್ದಿರುವ ಶ್ರೀಕಾಂತ್ ಗೆ ಸಚಿನ್ ಟ್ವಿಟರ್ ನಲ್ಲಿ ಶುಭಾಷಯ ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ನಿಮ್ಮ ಒಂದು ಸಂದೇಶ ನನಗೆ ಬಿಲಿಯನ್ ಸಂದೇಶಗಳ ಸಮಾನ ಎಂದು ಭಾವುಕರಾಗಿ ಹೇಳಿದ್ದಾರೆ. ಸತತ ಎರಡು ಪ್ರಶಸ್ತಿ ಗೆದ್ದಿರುವ ಶ್ರೀಕಾಂತ್ ಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಪ್ರಧಾನಿ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಇವರ ಸಾಧನೆಗೆ ಮಹೀಂದ್ರಾ ಸಂಸ್ಥೆ ಒಂದು ಕಾರು ಉಡುಗೊರೆಯಾಗಿ ನೀಡುತ್ತಿರುವುದಾಗಿ ಘೋಷಿಸಿದೆ. ಇನ್ನು, ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ 5 ಲಕ್ಷ ರೂ. ಬಹುಮಾನ ಘೋಷಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗಿಂತಲೂ ಕೂಲ್ ಕ್ಯಾಪ್ಟನ್ ಮಿಥಾಲಿ ರಾಜ್!