Select Your Language

Notifications

webdunia
webdunia
webdunia
webdunia

ಕೊನೆಗೂ ಪಿವಿ ಸಿಂಧುವಿಗೆ ಮನೆಗೆ ನಿವೇಶನ ಸಿಕ್ತು!

ಕೊನೆಗೂ ಪಿವಿ ಸಿಂಧುವಿಗೆ ಮನೆಗೆ ನಿವೇಶನ ಸಿಕ್ತು!
Hyderabad , ಶುಕ್ರವಾರ, 5 ಮೇ 2017 (19:23 IST)
ಹೈದರಾಬಾದ್: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧುಗೆ ತೆಲಂಗಾಣ ಸರ್ಕಾರದ ವತಿಯಿಂದ ಮನೆ ಕಟ್ಟಲು ನಿವೇಶನ ನೀಡಲಾಗಿದೆ.

 
ಪ್ರಗತಿ ಭವನ್ ನಲ್ಲಿ 1000 ಅಡಿ ವಿಶಾಲವಾದ ಜಮೀನು ಬಹುಮಾನ ರೂಪದಲ್ಲಿ ಸಿಂದುಗೆ ನೀಡಲಾಗಿದೆ. ಒಲಿಂಪಿಕ್ಸ್ ಪದಕ ಗೆದ್ದ ಸಂದರ್ಭದಲ್ಲಿ ಸಿಂಧುವಿಗೆ ನಿವೇಶನ ನೀಡುವುದಾಗಿ ತೆಲಂಗಾಣ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಸಿಎಂ ಚಂದ್ರಶೇಖರ್ ರಾವ್ ಭರವಸೆ ಈಡೇರಿಸಿದ್ದಾರೆ.

ಅದನ್ನು ಈಗ ನೆರವೇರಿಸಿದೆ. ‘ಒಲಿಂಪಿಕ್ಸ್ ಗೆದ್ದು ಬಂದ ಸಂದರ್ಭದಲ್ಲಿ ಸಿಎಂ 5 ಕೋಟಿ ರೂ. ಬಹುಮಾನ ನೀಡಿದ್ದರು. ಇದೀಗ ನಿವೇಶನ ನೀಡಿದ್ದಾರೆ. ಇದಕ್ಕಿಂತ ಹೆಚ್ಚಿನದನ್ನು ನಾನು ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?’ ಎಂದು ಸಿಂಧು ಖುಷಿಯಿಂದ ಹೇಳಿಕೊಂಡಿದ್ದಾರೆ.

ಸಿಂಧುವಿಗೆ ನೀಡಿದ ಅದೇ ನಿವೇಶನದ ಹಿಂಭಾಗದಲ್ಲಿ ಕೋಚ್ ಗೋಪಿಚಂದ್ ಗೂ ನಿವೇಶನ ಒದಗಿಸಲಾಗಿದೆ. ಅದಲ್ಲದೆ, ಈ ನಿವೇಶನ ಗೋಪಿಚಂದ್ ಬ್ಯಾಡ್ಮಿಂಡನ್ ಅಕಾಡೆಮಿಗೂ ಸನಿಹವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಬ್ಯಾಟಿಂಗ್ ನೀವು ನೋಡಿಲ್ಲವಲ್ಲ ಎಂದು ಡೆಲ್ಲಿ ಡ್ಯಾಶರ್ ಗಳಿಗೆ ದ್ರಾವಿಡ್ ಹೇಳಿದ್ದೇಕೆ?