Webdunia - Bharat's app for daily news and videos

Install App

ಯೋಗೇಶ್ವರ್‌ಗೆ ಸ್ವರ್ಣ ಯೋಗ?

Webdunia
ಶನಿವಾರ, 3 ಸೆಪ್ಟಂಬರ್ 2016 (10:42 IST)
ಲಂಡನ್ ಓಲಂಪಿಕ್ಸ್‌ನಲ್ಲಿ ಕುಸ್ತಿ ಪಟು ಯೋಗೇಶ್ವರ್ ಗೆದ್ದಿದ್ದ ಕಂಚು ಬೆಳ್ಳಿ ಪದಕಕ್ಕೆ ಬಡ್ತಿ ಹೊಂದಿತ್ತು. ಅದನ್ನು ನಯವಾಗಿ ನಿರಾಕರಿಸಿದ್ದ ಅವರು ಮತ್ತಷ್ಟು ಗೌರವಕ್ಕೆ ಪಾತ್ರರಾಗಿದ್ದರು. ಆದರೆ ಅವರೆಷ್ಟು ನಿರಾಕರಿಸಿದರೂ ಅದೃಷ್ಟ ಅವರ ಬೆನ್ನು ಬಿಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮತ್ತೀಗ ಅವರ ಕಂಚಿನ ಪದಕ ಚಿನ್ನಕ್ಕೆ ಬಡ್ತಿ ಹೊಂದುವ ಸುದ್ದಿ ಹರಿದು ಬಂದಿದೆ. 

ಅದು ಹೇಗೆ ಅಂತೀರಾ? 2012ರ ಓಲಂಪಿಕ್ಸ್‌ನಲ್ಲಿ ಕುಸ್ತಿ ಪಂದ್ಯದಲ್ಲಿ (60 ಕೆಜಿ. ಫ್ರಿಸ್ಟೈಲ್‌) ಮೊದಲ ಸ್ಥಾನ ಗಳಿಸಿದ್ದ ಅಜರ್‌ಬೈಜಾನ್‌ನ ತೊಗರುಲ್ ಅಸ್ಗರೊವ್ ಸಹ ನಿಷೇಧಿತ ಮದ್ದು ಸೇವಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ಪಂದ್ಯಾವಳಿಯಲ್ಲಿ ಬೆಳ್ಳಿ ಗೆದ್ದಿದ್ದ ಬೆಸಿಕ್ ಕುದುಕೊವ್ ಉದ್ದೀಪನಾ ಮದ್ದು ಸೇವಿಸಿರುವುದು ಕಳೆದ ನಾಲ್ಕು ದಿನಗಳ ಹಿಂದೆ ಸಾಬೀತಾಗಿತ್ತು. ಹೀಗಾಗಿ ಆ ಪದಕವನ್ನು ಯೋಗೇಶ್ವರ್ ಅವರಿಗೆ ಹಸ್ತಾಂತರಿಸುವ ಬಗ್ಗೆ ವರದಿ ಬಂದಿತ್ತು. ಆದರೆ ಮೃತ ಕುದುಕೊವ್ ಅವರ ಗೌರವಾರ್ಥ ಯೋಗೇಶ್ವರ್ ನಯವಾಗಿ ಬೆಳ್ಳಿ ಪದಕವನ್ನು ತಳ್ಳಿ ಹಾಕಿದ್ದರು. 
 
ಮತ್ತೀಗ ಚಿನ್ನ ಗೆದ್ದಿದ್ದ ಅಸ್ಗರೊವ್ ಸಹ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದರೆ ಭಾರತಕ್ಕೆ ದೊರೆತ ಕಂಚು ಚಿನ್ನಕ್ಕೆ ಬಡ್ತಿ ಪಡೆಯುವುದಂತೂ ಖಚಿತ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments