ಕಳೆದ ಬಾರಿ ಪಿಸ್ತೂಲ್ ಸಮಸ್ಯೆಯಿಂದ ತಪ್ಪಿದ ಪದಕ, ಈ ಬಾರಿ ಮಿಸ್ ಆಗಲಿಲ್ಲ: ಮನು ಭಾಕರ್ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳು

Krishnaveni K
ಸೋಮವಾರ, 29 ಜುಲೈ 2024 (14:34 IST)
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಶೂಟರ್ ಮನು ಭಾಕರ್ ಕಳೆದ ಬಾರಿಯೇ ಪದಕ ಗೆಲ್ಲಬೇಕಿತ್ತು. ಆದರೆ ಪಿಸ್ತೂಲ್ ಸಮಸ್ಯೆಯಿಂದ ಕೊನೆಯ ಹಂತದಲ್ಲಿ ಕೈ ತಪ್ಪಿ ಹೋಗಿತ್ತು. ಆದರೆ ಈ ಬಾರಿ ಹಾಗಾಗಲು ಅವರು ಬಿಡಲಿಲ್ಲ.

ದೇಶಕ್ಕೆ ಹೆಮ್ಮೆಯ ಕ್ರೀಡಾಪಟುಗಳನ್ನು ನೀಡಿದ ಹರ್ಯಾಣದಿಂದ ಬಂದವರು ಮನು ಭಾಕರ್. 10 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಈ ಬಾರಿ ಕಂಚಿನ ಪದಕ ಗೆದ್ದು ಕೊಡುವ ಮೂಲಕ ಒಲಿಂಪಿಕ್ಸ್ ಆರಂಭವಾದ ಎರಡನೇ ದಿನಕ್ಕೇ ಪದಕದ ಖಾತೆ ತೆರೆಯುವಂತೆ ಮಾಡಿದ್ದಾರೆ.

ಕೇವಲ ಶೂಟಿಂಗ್ ಮಾತ್ರವಲ್ಲ, ಸ್ಕೇಟಿಂಗ್, ಬಾಕ್ಸಿಂಗ್ ನಲ್ಲೂ ಮನು ಭಾಕರ್ ಗೆ ಆಸಕ್ತಿಯಿತ್ತು. ಥಾನ್ ತಾ ಎಂಬ ಸಮರ ಕಲೆಯಲ್ಲೂ ಪ್ರವೀಣೆ. 14 ನೇ ವಯಸ್ಸಿನಿಂದ ಶೂಟಿಂಗ್ ನಲ್ಲಿ ತರಬೇತಿ ಆರಂಭಿಸಿದ್ದರು. 2017 ರಲ್ಲಿ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು ಸೋಲಿಸಿದ್ದರು.

ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಪಿಸ್ತೂಲ್ ಸ್ಪರ್ಧಾ ಸುತ್ತಿನಲ್ಲೇ ಕೈಕೊಟ್ಟಿತು. ಇದರಿಂದಾಗಿ ಪದಕ ಸುತ್ತಿನಲ್ಲಿ ಭಾಗವಹಿಸಲಾಗದೇ ನಿರಾಶೆ ಅನುಭವಿಸಿದರು. ಪಿಸ್ತೂಲ್ ಸರಿಪಡಿಸುವಷ್ಟರಲ್ಲಿ ಅವರ ಅಮೂಲ್ಯ 20 ನಿಮಿಷ ಕಳೆದುಹೋಗಿತ್ತು. ಆದರೆ ಅಂದು ಅನುಭವಿಸಿದ ನಿರಾಸೆಗೆ ಇಂದು ಪದಕ ಗೆಲ್ಲುವ ಮೂಲಕ ನೋವು ಮರೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ವಿಶ್ವಕಪ್ ಗೆದ್ದ ಮೈದಾನದಲ್ಲೇ ಸ್ಮೃತಿ ಮಂಧಾನಗೆ ಕನಸಿನಂತೆ ಪ್ರಪೋಸ್ ಮಾಡಿದ ಭಾವೀ ಪತಿ video

ಸಖತ್ ಫನ್ನಿಯಾಗಿ ಎಂಗೇಜ್ ಮೆಂಟ್ ವಿಷ್ಯ ಹೊರಹಾಕಿದ ಸ್ಮೃತಿ ಮಂಧಾನ Video

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಮುಂದಿನ ಸುದ್ದಿ
Show comments