ಸಕ್ಸಸ್‌ನೊಂದಿಗೆ ಟೀಕೆ ಸಹಜ, ಅದನ್ನು ಕಡೆಗಣಿಸುವಂತೆ ಗುಕೇಶ್‌ಗೆ ಕಿವಿಮಾತು ಹೇಳಿದ ವಿಶ್ವನಾಥ್ ಆನಂದ್‌

Sampriya
ಶುಕ್ರವಾರ, 13 ಡಿಸೆಂಬರ್ 2024 (17:29 IST)
Photo Courtesy X
ನವದೆಹಲಿ: ಯಶಸ್ವಿನೊಂದಿಗೆ ಟೀಕೆಗಳು ಸಾಮಾನ್ಯ. ಅದನ್ನು ಕಡೆಗಣಿಸುವಂತೆ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್, ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್‌ ಅವರು ವಿಶ್ವ ಚೆಸ್ ಚಾಂಪಿಯನ್‌ಶಿಷ್ 2024ರ ವಿಜೇತ ಡಿ ಗುಕೇಶ್ ಅವರನ್ನು ಅವರನ್ನು ಅಭಿನಂದಿಸಿ, ಕಿವಿಮಾತು ಹೇಳಿದರು.

ಸಿಂಗಾಪುರದಲ್ಲಿ ನಡೆದ ಚಾಂಪಿಯನ್‌ಶಿಪ್‌ನ 14ನೇ ಮತ್ತು ಅಂತಿಮ ಪಂದ್ಯದಲ್ಲಿ ಲಿರೆನ್‌ರನ್ನು ಸೋಲಿಸಿ ವಿಶ್ವ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಗುಕೇಶ್‌ ಅವರು ಹೊಸ ಇತಿಹಾಸ ನಿರ್ಮಿಸಿದರು. ಆದರೆ ಈ ಸ್ಪರ್ಧೆಯ ಸುತ್ತಿನ ಬಗ್ಗೆ ಮಾಜಿ ವಿಶ್ವಚಾಂಪಿಯನ್‌ರಾದ ವ್ಲಾಡಿಮಿರ್ ಕ್ರಾಮ್ನಿಕ್,  ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಅವರು ನಿರಾಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗುಕೇಶ್‌ಗೆ ಕಿವಿಮಾತು ಹೇಳಿದ ವಿಶ್ವನಾಥನ್ ಅವರು ಗೆಲುವಿನ ಜತೆಗೆ  ಟೀಕೆಗಳು ಸಹಜ ಎಂದಿದ್ದಾರೆ.

ವಿಶ್ವ ಚೆಸ್‌ ಚಾಂಪಿನಯನ್‌ಶಿಪ್ 2024ರ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ವಿಶ್ವ ಚಾಂಪಿಯನ್ ವ್ಲಾಡಿಮಿರ್ ಕ್ರಾಮ್ನಿಕ್ ಅವರು ಪಂದ್ಯದ ಸಮಯದಲ್ಲಿ ಪ್ರದರ್ಶಿಸಲಾದ ಚೆಸ್‌ನ ಗುಣಮಟ್ಟ ನೋಡಿದಾಗ ಇದು ನಮಗೆ ತಿಳಿದಿರುವಂತೆ ಚೆಸ್‌ನ ಅಂತ್ಯ ಎಂದು ಹೇಳಿದ್ದಾರೆ. ಅದಲ್ಲದೆ ಡಿಂಗ್ ಲಿರೆನ್ ಮಾಡಿದ ನಿರ್ಣಾಯಕ ಪ್ರಮಾದವನ್ನು "ಬಾಲಿಶ" ಎಂದು ಕರೆದಿದ್ದಾರೆ.

ಐದು ಬಾರಿಯ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಕೂಡ ಸ್ಪರ್ಧೆಯ ಸುತ್ತುಗಳಲ್ಲಿ ಪ್ರದರ್ಶಿಸಲಾದ ಗುಣಮಟ್ಟವನ್ನು ಟೀಕಿಸಿದ್ದಾರೆ, "ಇದು ಇಬ್ಬರು ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧಿಗಳ ನಡುವಿನ ಆಟದಂತೆ ತೋರಲಿಲ್ಲ. ಇದು ಬಹುಶಃ ಎರಡನೇ ಸುತ್ತು ಅಥವಾ ಮೂರನೇ ಸುತ್ತಿನಂತೆಯೇ ಕಂಡಿತು ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಗುಕೇಶ್‌ಗೆ ಕಿವಿಮಾತು ಹೇಳಿದ ಚೆಸ್ ದಿಗ್ಗಜ ವಿಶ್ವನಾಥನ್ ಅವರು  "ನನಗೆ ತುಂಬಾ ಸಂತೋಷವಾಗಿದೆ. ನಾನು ನಿನ್ನೆ ಇತಿಹಾಸ ನಿರ್ಮಿಸುವುದನ್ನು ಅಕ್ಷರಶಃ ನೋಡುತ್ತಿದ್ದೆ ಎಂದಿದ್ದಾರೆ.

<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಐಪಿಎಲ್‌ ಮಿನಿ ಹರಾಜಿನಲ್ಲಿ ಕನ್ನಡಿಗರಿಗೆ ಭಾರೀ ನಿರಾಸೆ: ಆರ್‌ಸಿಬಿಗೆ ಘಟಾನುಘಟಿಗಳ ಎಂಟ್ರಿ

IND vs SA: ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

ಮುಂದಿನ ಸುದ್ದಿ
Show comments